ಬಂಟ್ವಾಳ, ಜೂ. 29(DaijiworldNews/SM): ಮೇಲ್ದರ್ಜೆಗೊಂಡ ಬಂಟ್ವಾಳ ವೃತ್ತದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಪೋಲೀಸ್ ಠಾಣೆಗೆ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ನಾಗರಾಜ್ ಎಚ್ .ಇ. ಟಿ.ಡಿ.ನಾಗರಾಜ್
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಈ ಮೊದಲು ಬಂಟ್ವಾಳ ವೃತ್ತ ನಿರೀಕ್ಷಕ ರಾಗಿದ್ದ ಟಿ.ಡಿ.ನಾಗರಾಜ್ ಅವರನ್ನು ಮರು ನೇಮಕ ಮಾಡಿದೆ. ವಿಟ್ಲ ಪೊಲೀಸ್ ಠಾಣೆಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನಾಗರಾಜ್ ಎಚ್ .ಇ. ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಇವರು ಈ ಹಿಂದೆ ವಿಟ್ಲ, ಪುತ್ತೂರು, ಕಡಬ ಬಂಟ್ವಾಳ ಗ್ರಾಮಾಂತರ ಹಾಗೂ ವೇಣೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆ ಮೂಲಕ ಇಬ್ಬರು ಖಡಕ್ ಆಫೀಸರ್ ಗಳು ಬಂಟ್ವಾಳ ತಾಲೂಕಿಗೆ ನೇಮಗೊಂಡಿದ್ದಾರೆ.
ಬಂಟ್ವಾಳ ವೃತ್ತ ಮೇಲ್ದರ್ಜೆಗೆ:
ಇನ್ನು 1956 ನಿಂದ ಬಂಟ್ವಾಳ ಸರ್ಕಲ್ ಕಾರ್ಯರಂಭ ಆಗಿತ್ತು. ಘಟಾನುಘಟಿಗಳು ಇಲ್ಲಿ ವೃತ್ತ ನಿರೀಕ್ಷಕ ರಾಗಿ ಸೇವೆ ಮಾಡಿದ್ದಾರೆ. 2021 ವರೆಗೆ ಬಂಟ್ವಾಳ ವೃತ್ತವಾಗಿ ಉಳಿದಿತ್ತು. ಬಂಟ್ವಾಳ ವೃತ್ತ ಕ್ಕೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ಮೆಲ್ಕಾರ್ ಟ್ರಾಫಿಕ್ ಹಾಗೂ ವಿಟ್ಲ ಪೋಲೀಸ್ ಠಾಣೆಗಳು ಒಳಗೊಂಡಿತ್ತು. ಸರಕಾರದ ಬದಲಾದ ಆದೇಶದಂತೆ ಮೂರು ಠಾಣೆಗಳು ಮೇಲ್ದರ್ಜೆಗೊಂಡಿದೆ. ಪಿ.ಐ.ಠಾಣೆಗಳಾಗಿ ಮೇಲ್ದರ್ಜೆಗೊಂಡ ಮೂರು ಠಾಣೆಗಳಿಗೆ ಪೋಲೀಸ್ ಇನ್ಸ್ ಪೆಕ್ಟರ್ ಗಳನ್ನು ಸರಕಾರ ಆದೇಶ ಮಾಡಿದೆ.
ಸದ್ಯ ಮೇಲ್ದರ್ಜೆಗೊಂಡ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಗ್ರಾಮಾಂತರ ಟಿ.ಡಿ.ನಾಗರಾಜ್, ವಿಟ್ಲಕ್ಕೆ ನಾಗರಾಜ್ ಎಚ್.ಇ. ಹೀಗೆ ಮೂರು ಖಡಕ್ ಅಧಿಕಾರಿಗಳು ಬಂಟ್ವಾಳದಲ್ಲಿ ಸದ್ಯ ಕರ್ತವ್ಯದಲ್ಲಿದ್ದಾರೆ.