ಮಂಗಳೂರು, ಜೂ. 29(DaijiworldNews/SM): ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ 385 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಮತ್ತೊಂದೆಡೆ ಉಡುಪಿ ಜಿಲ್ಲೆಯಲ್ಲಿ ಸೋಂಕುತರ ಸಂಖ್ಯೆ ಇಳಿಕೆಯಾಗಿದ್ದು, ಮಂಗಳಾವಾರದಂದು 83 ಮಂದಿಯಲ್ಲಿ ಮಾತ್ರವೇ ಸೋಂಕು ಪತ್ತೆಯಾಗಿದೆ.
ದ.ಕ. ಜಿಲ್ಲೆಯ ಮಂಗಳವಾರದ ಕೊರೋನಾ ವರದಿ:
ಮಂಗಳವಾರ ದ.ಕ.ದಲ್ಲಿ ಮತ್ತೆ 385 ಮಂದಿಯಲ್ಲಿ ಪಾಸಿಟಿವ್
ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆ
ಮಂಗಳವಾರದಂದು ಜಿಲ್ಲೆಯಲ್ಲಿ 744 ಮಂದಿ ಡಿಸ್ಚಾರ್ಜ್
ಮಂಗಳವಾರ ಮತ್ತೆ 15 ಮಂದಿ ಸೋಂಕಿನಿಂದಾಗಿ ಸಾವು
5038-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿಯ ಮಂಗಳವಾರದ ಕೋವಿಡ್ ರಿಪೋರ್ಟ್:
ಮಂಗಳವಾರದಂದು ಉಡುಪಿಯಲ್ಲಿ 83 ಮಂದಿಯಲ್ಲಿ ಸೋಂಕು
95- ಮಂದಿ ಮಂಗಳವಾರದಂದು ಬಿಡುಗಡೆ
987-ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿರುವ ಸಕ್ರೀಯ ಪ್ರಕರಣಗಳು
ಮಂಗಳವಾರ ಜಿಲ್ಲೆಯಲ್ಲಿ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ
392-ಜಿಲ್ಲೆಯಲ್ಲಿ ಒಟ್ಟು ಸೋಂಕಿಗೆ ಬಲಿಯಾದವರು
ಕಾಸರಗೋಡು ಜಿಲ್ಲೆಯ ಇಂದಿನ ಕೊರೋನಾ ವಿವರ:
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 570 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 421 ಮಂದಿ ಗುಣಮುಖರಾಗಿದ್ದಾರೆ. 4,754 ಮಂದಿ ಚಿಕಿತ್ಸೆಯಲ್ಲಿದ್ದಾರೆ. 20, 769 ಮಂದಿ ನಿಗಾದಲ್ಲಿದ್ದಾರೆ. ಬುಧವಾರ 5,684 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಇದುವರೆಗೆ 85,184 ಮಂದಿಗೆ ಸೋಂಕು ದ್ರಢಪಟ್ಟಿದ್ದು, 79,742 ಮಂದಿ ಗುಣಮುಖರಾಗಿದ್ದಾರೆ.