ಮಂಗಳೂರು, ಜೂ.29 (DaijiworldNews/HR): ಸುಮಾರು 40 ಮಹಿಳೆಯರನ್ನು ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಬಸ್ವೊಂದರಲ್ಲಿ ಜೂ 29 ರ ಸೋಮವಾರ ರಾತ್ರಿ 8:15 ಕರೆದೊಯ್ಯುತ್ತಿದ್ದಾಗ ಮುಲ್ಕಿಯ ನಾಗಬನಹಳ್ಳಿಯ ಸ್ಥಳೀಯರು ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದು,ಇವರ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಬಸ್ ನಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ ಕೊರೊನಾ ಲಸಿಕೆಗಾಗಿ 40 ಮಹಿಳೆಯರನ್ನು ಕರೆದೊಯ್ಯುತ್ತಿದ್ದಾರೆಂದು ಹೇಳಿಕೊಂಡಿದ್ದು ಇದು ಅನುಮಾನ ಹುಟ್ಟುಹಾಕಿದೆ. ರಾತ್ರಿ ವೇಳೆ ಲಸಿಕೆಗಾಗಿ ಮುಲ್ಕಿಯಿಂದ ದೇರಳಕಟ್ಟೆಗೆ ಸಾಮಾಜಿಕ ಅಂತರ ಪಾಲಿಸದೆ ಬಸ್ಸಿನಲ್ಲಿ ತುಂಬಿ ಕರೆದೊಯ್ಯುವ ಪ್ರಮೇಯ ಏನಿತ್ತು? ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಆಯುಕ್ತ ವಿವರಿಸಿದ್ದಾರೆ
ಇನ್ನು ಹೆಚ್ಚಿನ ವಿಚಾರಣೆಗಾಗಿ ನಾವು ಚಾಲಕ ಮತ್ತು ನರ್ಸ್ ಒಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಮೂಡುಬಿದಿರೆ: ನಾಡಬಂಬ್ ಪತ್ತೆ -ಸ್ಥಳೀಯರಲ್ಲಿ ಆತಂಕ
ಮೂಡಬಿದಿರೆಯ ಬಡಗಾ ಪ್ರದೇಶದಲ್ಲಿ ನಾಡಬಂಬ್ ಪತ್ತೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಹಂದಿಗಳ ಅಥವಾ ಕಾಡುಪ್ರಾಣಿಗಳ ಬೇಟೆಗಾಗಿ ನಾಡ ಬಾಂಬ್ ಕೋಳಿ ಮಾಂಸದ ಜೊತೆ ಇರಿಸಲಾಗಿದ್ದು , ಇದರಿಂದ ಆಕರ್ಷಿತವಾದ ಕಾಡು ಪ್ರಾಣಿ ಅದನ್ನು ಸೇವಿಸಿದಾಗ ಬಾಂಬ್ ಸ್ಫೋಟಗೊಳ್ಳುತ್ತದೆ.
ಸ್ಫೋಟಕವನ್ನು ಇಟ್ಟವರು ಯಾರು ಎಂಬುದನ್ನು ಇನ್ನೂ ತಿಳಿದು ಬಂದಿಲ್ಲ.
ಸ್ಫೋಟಕ ಕಾಯ್ದೆ ಮತ್ತು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.