ಕುಂದಾಪುರ, ಜೂ 29 (DaijiworldNews/MS): ಬೈಕ್ ಗೆ ಕೋಳಿ ಸಾಗಾಟದ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆಂದು ಮುಂಜಾನೆ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಯ ಬೆಳ್ವೆ ಪೆಟ್ರೋಲ್ ಬಂಕ್ ಬಳಿ ಜೂ.29 ರ ಮಂಗಳವಾರ ನಡೆದಿದೆ.
ಮೃತರನ್ನು ಹೆಂಗವಳ್ಳಿ ಗ್ರಾಮದ ತೊಂಭತ್ತು ಇರಿಗೆ ನಿವಾಸಿ ಮೋಹನ್ ನಾಯ್ಕ್ ಅವರ ಪುತ್ರ ಲಕ್ಷ್ಮಣ ನಾಯ್ಕ್(30) ಎಂದು ಗುರುತಿಸಲಾಗಿದೆ. ಇವರು ಬೆಳಗಿನ ಜಾವಾ 5.30ರ ಸಂದರ್ಭದಲ್ಲಿ ತನ್ನ ಬೈಕಿನಲ್ಲಿ ತನ್ನ ಮನೆಯಿಂದ ಆಲ್ಬಾಡಿಯಲಿರುವ ಚಕ್ಕುಲಿ ಪಾಕ್ಟರಿಗೆ ಕೆಲಸಕ್ಕೆ ತೆರಳುತ್ತಿದ್ದಾಗ ಬೆಳ್ವೆ ಪೆಟ್ರೋಲ್ ಬಂಕ್ ಬಳಿ ಕೋಳಿ ಸಾಗಣೆಯ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕನ್ನು ತುಂಬಾ ದೂರ ಎಳೆದುಕೊಂಡು ಹೋಗಿದ್ದು, ಇದರೊಂದಿಗೆ ವಾಹನ ತಲೆಯ ಮೇಲೆ ಹರಿದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕಳಚಿದ ಕುಟುಂಬದ ಆಧಾರ ಕೊಂಡಿ : ಮೋಹನ್ ನಾಯ್ಕ್ ಅವರ 6 ಮಕ್ಕಳಲ್ಲಿ ಲಕ್ಷ್ಮಣ ಅವರು ಮಾತ್ರ ಗಂಡು ಮಗ. ಮೋಹನ್ ನಾಯ್ಕ್ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ. ಇನ್ನೂ ಇಬ್ಬರು ಹೆಣ್ಣು ಮಕ್ಕಳು ಮದುವೆಗೆ ಬಾಕಿ ಇದ್ದಾರೆ. ಕುಟುಂಬಕ್ಕೆ ಲಕ್ಷ್ಮಣ ಅವರ ಆಧಾಯವೇ ಆಧಾರವಾಗಿದೆ. ಅವರು ಮೃತ ಪಟ್ಟಿದ್ದರಿಂದ ಕುಟುಂಬದ ಆಧಾರ ಕೊಂಡಿ ಕಳಚಿದಂತಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ