ಕಾರ್ಕಳ, ಜೂ.28 (DaijiworldNews/HR): ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ 130 ಮಂದಿ ರಿಕ್ಷಾ ಚಾಲಕರಿಗೆ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಅವರು 250 ಮುಖಬೆಲೆಯ ಇಂಧನ ಕೂಪನ್ನ ನೆರವು ನೀಡಿದ್ದಾರೆ.
ಶಾಸಕ ವಿ.ಸುನೀಲ್ಕುಮಾರ್ ಕೂಪನ್ನ್ನು ಹಸ್ತಾಂತರಿಸಿದರು.
ಕಾರ್ಕಳ ತಾಲೂಕು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಸಂತೋಷ್. ರಾವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಷ್ಮಾ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಹರಿಶ್ಚಂದ್ರ, ಪ್ರವೀಣ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ. ಹೆಗ್ಡೆ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.