ಮಂಗಳೂರು, ಜೂ.28 (DaijiworldNews/HR): ಕರಾವಳಿಗೆ ಟ್ರಿಪ್ ಹೋಗೋದನ್ನು ನಿಲ್ಲಿಸುವ ತನಕ ಮಂಗಳೂರಿನ ಜನರ ಸೊಕ್ಕು ಮುರಿಯೋದಿಲ್ಲ ಎಂಬ ಕ್ಲಬ್ ಹೌಸ್ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರುನಾಡು ವರ್ಸಸ್ ತುಳುನಾಡು ಕ್ಲಬ್ ಹೌಸ್ನಲ್ಲಿ ನಡೆದಿರುವ ಚರ್ಚೆಯಲ್ಲಿ, "ಕರಾವಳಿಗೆ ಟ್ರಿಪ್ ಹೋಗೋದನ್ನು ನಿಲ್ಲಿಸಬೇಕು. ನಮ್ಮಲ್ಲಿ ದೇವಸ್ಥಾನಗಳಿಲ್ವಾ, ಮನೆ ದೇವರು ಇಲ್ವಾ ಇದನ್ನು ಬಿಟ್ಟು ನಾವು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ ಮೊದಲಿಗೆ ಅದನ್ನು ನಾವು ಕಡಿಮೆ ಮಾಡಬೇಕು" ಎಂದು ಕರುನಾಡು ಕ್ಲಬ್ ಹೌಸ್ ಸದಸ್ಯರು ಹೇಳಿದ್ದಾರೆ.
"ಕನ್ನಡ ವಾಹಿನಿಯಲ್ಲಿ ಕರಾವಳಿಯ ಕೆಲವರು ಮೆರಿತಾ ಇದ್ದಾರೆ. ಅವರನ್ನು ಪ್ರೊಮೋಟ್ ಮಾಡೋದನ್ನು ಕಡಿಮೆ ಮಾಡಬೇಕು ಎಂದಿರುವ ಕರುನಾಡು ಕ್ಲಬ್ ಹೌಸ್ ಗ್ರೂಪ್, ಅನುಶ್ರೀ ಎಂಟ್ರಿ ಆದ ಬಳಿಕ ತುಳುನಾಡಿನವರನ್ನು ತುಂಬುತ್ತಿದ್ದಾರೆ" ಎಂದಿದ್ದಾರೆ.
ಇನ್ನು ಕರುನಾಡು ವರ್ಸಸ್ ತುಳುನಾಡು ಕ್ಲಬ್ ಹೌಸ್ನಲ್ಲಿ ನಡೆದಿರುವ ಈ ಚರ್ಚೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.