ಕಾರ್ಕಳ, ಜೂ 28 (DaijiworldNews/MS): ನಲ್ಲೂರು ಮಂಜಲ್ತಾರ್ ಕೆರೆಗೆ ಬಿದ್ದು ವ್ಯಕ್ತಿಯೊ ಬ್ಬರು ಆತ್ಮಹತ್ಯೆಗೈದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಸಿಲ್ವೆಸ್ಟರ್ ಮಸ್ಕರೇನಸ್ (54) ಎಂದು ಗುರುತಿಸಲಾಗಿದೆ.
ಎಂದಿನಂತೆ ಮಸ್ಕರೇನಸ್ ಅವರು ಭಾನುವಾರ ಬೆಳಿಗ್ಗೆ 7.15ರ ವೇಳೆಗೆ ಮನೆಯಿಂದ ವಾರ್ಕಿಂಗ್ಗೆ ಹೋಗಿದ್ದು ಬಳಿಕ ಅವರ ಮೃತದೇಹವು ಸುಮಾರು ಒಂದುವರೆ ಕಿ.ಮೀ ದೂರದಲ್ಲಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲೆಂದು ನಿರ್ಮಿಸಿದ ಕೆರೆಯಲ್ಲಿ ಪತ್ತೆಯಾಗಿದೆ. ಸಿಲ್ವೆಸ್ಟರ್ ಮಸ್ಕರೇನಸ್ ಮನೆಗೆ ಹಿಂತಿರುಗದೇ ಹಿಂದುದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿದಾಗ ಕೆರೆಯ ದಂಡೆಯ ಮೇಲೆ ಸಂಜೆ ಹೊತ್ತಿಗೆ ಮೃತರ ಚಪ್ಪಲಿ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಕೆರೆಯಲ್ಲಿ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಿದೆ.
ಮೃತರಿಗಿದ್ದ ಹೃದಯ ಸಂಬಂಧಿತ ಕಾಯಿಲೆ ಇದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.