ಕಾರ್ಕಳ, ಜೂ 28 (DaijiworldNews/MS): ಕಡ್ತಲದ ಕುಂಜಿಕೆರೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜೂಜಾಟ ಕೇಂದ್ರದ ವಿರುದ್ಧ ಅಜೆಕಾರು ಪೊಲೀಸ್ ಉಪನಿರೀಕ್ಷಕ ಸುದರ್ಶನ್ ದೊಡಮನಿ ದಾಳಿ ನಡೆಸಿ ಆರೋಪಿತರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕಡ್ತಲ ಕುಂಜಿಕೆರೆಯ ಪ್ರಸನ್ನ ಹೆಗ್ಡೆ (53), ಶಿರ್ಲಾಲು ಹಾಡಿಯಂಗಡಿಯ ರಾಜೇಶ್ ಶೆಟ್ಟಿ (35) ಮರ್ಣೆ ಮುದೆಲ್ಕಡಿಯ ಹರೀಶ್ ಕಾಮತ್ (45), ಮರ್ಣೆ ಬೊಂಡುಕುಮೇರಿ ಸುರೇಂದ್ರ ಶೆಟ್ಟಿ (35), ಮರ್ಣೆ ಕೊಬುಗುಡ್ಡೆಯ ಮಹೇಶ್ ಶೆಟ್ಟಿ(33), ಮರ್ಣೆ ಕಾಂತಬೆಟ್ಟುವಿನ ಸಂತೋಷ್ (38), ಕಡ್ತಲದ ಸಿರಿಬೈಲಿನ ಸತೀಶ್ (40) ಇವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಅಂದರ್ ಬಾಹರ್ ಇಸ್ಪೀಟ್ ಆಟಕ್ಕೆ ಬಳಸಿದ ರೂ. 11,420 ರೂಪಾಯಿ, 52 ಇಸ್ಪೀಟ್ ಎಲೆಗಳು, ಹಳೆಯ ಪ್ಲಾಸ್ಟಿಕ್ ಗೋಣಿಚೀಲವನ್ನು ಸ್ವಾಧೀನಪಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.