ಮಂಗಳೂರು, ಜೂ.28 (DaijiworldNews/HR): ಸ್ಟೇಟ್ ಬ್ಯಾಂಕಿನ ಹ್ಯಾಮಿಲ್ಟನ್ ಸರ್ಕಲ್ ರಸ್ತೆಯ ಬದಿಯಲ್ಲಿರುವ ಬಸ್ ನಿಲ್ದಾಣದ ಹೊರಗೆ ನಿಲುಗಡೆ ಮಾಡುತ್ತಿದ್ದ ಖಾಸಗಿ ಸಿಟಿ ಬಸ್ಸುಗಳು (ರೂಟ್ ಬಸ್ಸುಗಳು) ಸ್ಟೇಟ್ ಬ್ಯಾಂಕ್ನಲ್ಲಿರುವ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.
ಈ ಹಿಂದೆ ಜಿಲ್ಲೆಯೊಳಗೆ ಹಾಗೂ ಅಂತರ್ ಜಿಲ್ಲೆಗೆ ಪ್ರಯಾಣಿಸುವ ಖಾಸಗಿ ಬಸ್ಸುಗಳು ಮತ್ತು ಕೆಎಸ್ಆರ್ಟಿಸಿ ಬಸ್ಗಳನ್ನು ಸ್ಟೇಟ್ ಬ್ಯಾಂಕಿನ ಬಸ್ ನಿಲ್ದಾಣದೊಳಗೆ ಅನುಮತಿಸಲಾಗಿತ್ತು. ಆದರೆ, ಸಿಟಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿರಲಿಲ್ಲ.
ಈ ಕುರಿತು ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ಮಾತನಾಡಿ, "ಈ ಮೊದಲು ನಗರ ಬಸ್ಸುಗಳನ್ನು ಹ್ಯಾಮಿಲ್ಟನ್ ಮತ್ತು ರಾವ್ ಸರ್ಕಲ್ ರಸ್ತೆ ಬದಿಯಲ್ಲಿರುವ ಬಸ್ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಸಿಟಿ ಬಸ್ಸುಗಳನ್ನು ಬಸ್ ನಿಲ್ದಾಣದೊಳಗೆ ನಿಲ್ಲಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ" ಎಂದಿದ್ದಾರೆ.