ಉಡುಪಿ, ಜೂ.28 (DaijiworldNews/HR): ಜಿಲ್ಲೆಯಲ್ಲಿ ತಿಂಗಳುಗಳ ಬಳಿಕ 2 ನರ್ಮ್ ಬಸ್ ಸಂಚಾರ ಇಂದು ಆರಂಭಗೊಂಡಿದ್ದು, ಖಾಸಗಿ ಬಸ್ಗಳ ಸೇವೆ ಸ್ಥಗಿತಗೊಂಡಿದ್ದರೂ ನರ್ಮ್ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ಸರಕಾರದಿಂದ ಬಸ್ ಓಡಿಸಲು ಅನುಮತಿ ಸಿಕ್ಕಿದ್ದರೂ ಕೂಡ ನರ್ಮ್ ಬಸ್ ರಸ್ತೆಗಿಳಿದಿರಲಿಲ್ಲ.
ಇನ್ನು ಉಡುಪಿ - ಪಡುಕೆರೆ, ಉಡುಪಿ - ಗರಡಿಮಜಲು, ಉಡುಪಿ - ಪರ್ಕಳ ನಡುವೆ ನರ್ಮ್ ಬಸ್ಗಳು ಸಂಚಾರ ಆರಂಭಗೊಂಡಿದೆ.
ಈ ನಡುವೆ ಉಡುಪಿ - ಕುಂದಾಪುರದ ಕೆಎಸ್ಆರ್ಟಿಸಿ ಗೆ ಉತ್ತಮ ಸ್ಪಂದನೆ ದೊರೆತಿದ್ದು, ಉಡುಪಿಯಿಂದ ಬೆಂಗಳೂರು, ಮೈಸೂರು, ಆಗುಂಬೆ, ಶಿವಮೊಗ್ಗ ಕ್ಕೂ ಕೆಎಸ್ಆರ್ಟಿಸಿ ಸಂಚಾರ ನಡೆಸುತ್ತಿದೆ.
ಇನ್ನೂ ಹೆಚ್ವಿನ ನರ್ಮ್ ಬಸ್ ಸೇವೆ ಆರಂಭಿಸಿಲು ಸಾರ್ವಜನಿಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಸಾರಿಗೆ ತ್ಯಜಿಸಿ ಸ್ವಂತ ವಾಹನಗಳಲ್ಲಿಯೇ ಹೆಚ್ಚಿನ ಸಾರ್ವಜನಿಕರು ಮುಖ ಮಾಡುತ್ತಿರುವುದರಿಂದ ಉಡುಪಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿದು ಬಂದಿದೆ.