ಉಡುಪಿ, ಜೂ. 27 (DaijiworldNews/SM): ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ವಿಷೇಶ ಕೋವಿಡ್ ವ್ಯಾಕ್ಸಿನ್ ಶಿಬಿರವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ವಿವಿದೆಢೆ ಕಾಲೇಜುಗಳಲ್ಲಿ ಲಸಿಕಾ ಶಿಬಿರವನ್ನು ಪದವಿ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿಗಳಿಗಾಗಿ ಏರ್ಪಡಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 33 ಸಾವಿರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಹಂತ ಹಂತವಾಗಿ ಲಸಿಕೆಯನ್ನು ನೀಡಲಾಗುವುದು. ಜಿಲ್ಲೆಯಾದ್ಯಂತ ಸೋಮವಾರ 6000 ಡೋಸ್ ಕೋವಿಡ್ ಲಸಿಕೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲು ಸಿದ್ಧತೆ ನಡೆಸಲಾಗಿದೆ.
ತೆಂಕನಿಡಿಯೂರು ಕಾಲೇಜಿನಲ್ಲಿ 700 ಡೋಸ್, ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ 500 ಡೋಸ್, ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನಲ್ಲಿ 250, ಮಣಿಪಾಲ ಮಾಧವ ಪೈ ಕಾಲೇಜಿನಲ್ಲಿ 150, ಸರಕಾರಿ ಪದವಿ ಕಾಲೇಜಿನಲ್ಲಿ 200 ಡೋಸ್, ಸರಕಾರಿ ಪದವಿ ಕಾಲೇಜು ಮುನಿಯಾಲ್ 130 ಡೋಸ್, ಕುಂದಾಪುರ ಭಂಡಾರ್ಕಾರ್ ಕಾಲೇಜಿನಲ್ಲಿ 500 ಡೋಸ್, ಬಿ.ಬಿ, ಹೆಗ್ಡೆ ಕಾಲೇಜಿನಲ್ಲಿ 200 ಡೋಸ್, ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ 50 ಡೋಸ್, ಕೋಟೇಶ್ವರ ಕಲವರ ವರದರಾಜ್ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200 ಡೋಸ್, ಮರವಂತೆ ಆರ್ಎಎಂಸಿ ಕಾಲೇಜಿನಲ್ಲಿ 200 ಡೋಸ್, ಶಂಕರ್ ನಾರಾಯಣ ಪದವಿ ಕಾಲೇಜು 300 ಡೋಸ್, ಬೈಂದೂರು ಕಾಲೇಜಿನಲ್ಲಿ 300 ಡೋಸ್, ಬಸ್ರೂರು ಶಾರದ ಕಾಲೇಜಿನಲ್ಲಿ 200, ಕಾರ್ಕಳ ಭುವನೇಂದ್ರ ಕಾಲೇಜು 100 ಡೋಸ್ ಕೋವಿಶೀಲ್ಡ್ ಸೇರಿದಂತೆ ಜಿಲ್ಲೆಯಾದ್ಯಂತ 6000 ಕೋವಿಡ್ ಲಸಿಕೆ ವಿತರಿಸಲಾಗುತ್ತದೆ.