ಮಂಗಳೂರು, ಜೂ.27 (DaijiworldNews/HR): ಹೋಟೆಲ್ ಶ್ರೀನಿವಾಸ್ ಕುಸಿತದ ಅಂಚಿನಲ್ಲಿದ್ದು, ಹೋಟೆಲ್ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರವನ್ನು ಪೊಲೀಸರು ನಿಷೇಧಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಿದ್ದು, ಹೋಟೆಲ್ನ ಆಡಳಿತ ಮಂಡಳಿಯು ವದಂತಿಗಳನ್ನು ಬದಿಗೊತ್ತಿ, ಹೋಟೆಲ್ ನವೀಕರಿಸಲಾಗುತ್ತಿದೆ ಮತ್ತು ಯಾವುದೇ ಕುಸಿತದ ಅಪಾಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಹೋಟೆಲ್ ವ್ಯವಸ್ಥಾಪಕ ವೆಂಕಟರಮಣ ದೈಜಿವರ್ಲ್ಡ್ ಜೊತೆ ಮಾತನಾಡಿ, "ನಮ್ಮ ಹೋಟೆಲ್ಗೆ ಸಂಬಂಧಿಸಿದಂತೆ ವಾಟ್ಸಾಪ್ನಲ್ಲಿ ವದಂತಿಗಳು ಹರಡಿವೆ ಎಂದು ನಮ್ಮ ಗಮನಕ್ಕೆ ಬಂದಿದೆ. ಕಟ್ಟಡದ ನವೀಕರಣ ಕಾರ್ಯವು ಒಂದು ತಿಂಗಳ ಹಿಂದೆ ಪ್ರಾರಂಭವಾಗಿದದು, ಈಗ ಮಳೆಯಿಂದಾಗಿ ಮತ್ತು ಲಾಕ್ಡೌನ್ ಕಾರಣದಿಂದಾಗಿ ಯಾವುದೇ ಕಾರ್ಮಿಕರಿಲಲದೆ ಕೆಲಸ ನಿಲ್ಲಿಸಲಾಗಿದೆ" ಎಂದರು.
"ಕಿಟಕಿ ಪ್ರದೇಶದಲ್ಲಿ ಕೆಲಸ ನಡೆಯುತ್ತಿರುವುದರಿಂದ, ಸಿಮೆಂಟ್ ತುಂಡುಗಳು ನೆಲದ ಮೇಲೆ ಬಿದ್ದು ಹಾನಿಯಾಗದಂತೆ ತಪ್ಪಿಸಲು ಟಾರ್ಪಾಲಿನ್ ಅನ್ನು ಕೆಳಗೆ ಇಡಲಾಗಿದೆ" ಎಂದಿದ್ದಾರೆ.
ಇನ್ನು "ಟಾರ್ಪಾಲಿನ್ ಮತ್ತು ಸಿಮೆಂಟಿನಿಂದ ಮುಚ್ಚಿದ ಕಟ್ಟಡವನ್ನು ಗಮನಿಸಿದ ಅನೇಕರು ಕಟ್ಟಡ ಕುಸಿತದ ಅಂಚಿನಲ್ಲಿದೆ ಎಂಬ ತಪ್ಪು ತೀರ್ಮಾನಕ್ಕೆ ಬಂದಿದ್ದಾರೆ" ಎಂದು ಅವರು ಹೇಳಿದರು.