ಮಂಗಳೂರು, ಜೂ. 26(DaijiworldNews/HR): ಮಂಗಳೂರಿನ ನಿಟ್ಟೆ ಶಂಕರ ಅಡ್ಯಂತಾಯ ಪಿಯು ಕಾಲೇಜಿನಲ್ಲಿ ಎಕ್ಸಾಮ್ 24x7 ಸಹಭಾಗಿತ್ವದೊಂದಿಗೆ ನೀಟ್, ಜೆಇಇ, ಸಿಇಟಿಗೆ ಇಂಟಿಗ್ರೇಟೆಡ್ ಕೋಚಿಂಗ್ ಲಭ್ಯವಾಗಲಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ಪ್ರಖ್ಯಾತವಾಗಿರುವ ನಿಟ್ಟೆ ಎಜ್ಯುಕೇಶನ್ ಟ್ರಸ್ಟಿನ ಭಾಗವಾಗಿರುವ ಮಂಗಳೂರಿನ ಎನ್.ಎಸ್.ಎ.ಎಮ್ ಪಿಯು ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಮೆಡಿಕಲ್ ಸ್ಪರ್ಧಾತ್ಮಕ ಪರೀಕ್ಷೆ ನೀಟ್ ಹಾಗೂ ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆ ಜೆಇಇ ಮತ್ತು ಸಿಇಟಿಗೆ ಇಂಟಿಗ್ರೇಟೆಡ್ ಕೋಚಿಂಗ್ ಆರಂಭವಾಗಿದೆ. ಕಳೆದ 5 ವರ್ಷಗಳಲ್ಲಿ ನೀಟ್ ಪರೀಕ್ಷೆಯಲ್ಲಿ ಸತತವಾಗಿ 100% ಫಲಿತಾಂಶ ನೀಡುತ್ತಾ ಸುಮಾರು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸರಕಾರಿ ಕೋಟದ ಮೆಡಿಕಲ್ ಸೀಟ್ ಪಡೆಯುವಂತೆ ಕೋಚಿಂಗ್ ನೀಡಿರುವ Exams 24x7.com ಈ ಇಂಟಿಗ್ರೇಟೆಡ್ ಕೋಚಿಂಗ್ನ ನೇತೃತ್ವ ವಹಿಸಿದೆ.
ವಿದ್ಯಾಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಶಿಕ್ಷಣ ತಜ್ಞರಾದ ಡಾ. ವಿನಯ ಹೆಗ್ಡೆಯವರ ದಕ್ಷ ಹಾಗೂ ಶಿಸ್ತುಬದ್ಧ ಮಾರ್ಗದರ್ಶನದಿಂದ ನಿಟ್ಟೆ ವಿದ್ಯಾಸಂಸ್ಥೆ, ಮಂಗಳೂರು, ದೇರಳಕಟ್ಟೆ, ನಿಟ್ಟೆ ಹಾಗೂ ಬೆಂಗಳೂರು ಮುಂತಾದೆಡೆ ಮೂವತ್ತೊಂಬತ್ತು ವಿದ್ಯಾಲಯಗಳ ಮೂಲಕ ವಿದ್ಯಾರ್ಜನೆ ನೀಡುತ್ತಿದೆ. ಇಂತಹ ಸಂಸ್ಥೆಯ ಆಡಳಿತಕ್ಕೊಳಪಟ್ಟ ಒಂದು ಜ್ಞಾನ ದೇಗುಲ ಮಂಗಳೂರಿನ ನಂತೂರಿನಲ್ಲಿರುವ ಡಾ. ಶಂಕರ ಅಡ್ಯಂತಾಯ ಪದವಿ ಪೂರ್ವ ಕಾಲೇಜು. ಇಲ್ಲಿ ಅನುಭವಿ ಅಧ್ಯಾಪಕ ವೃಂದ, ನುರಿತ ದಕ್ಷ ಆಡಳಿತ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಪ್ರಾಂಶುಪಾಲರು. ಸುಸಜ್ಜಿತ ಪ್ರಯೋಗಾಲಯ, ಎಲ್.ಸಿ.ಡಿ ಪ್ರಾಜೆಕ್ಟರುಗಳು, ದೃಶ್ಯ -ಶೃವ್ಯ ಸಂವಹನ ಸೌಲಭ್ಯ, ಸುಸಜ್ಜಿತ ಹಾಗೂ ವಿಶಾಲ ಗ್ರಂಥಾಲಯ, ಆಟದ ಮೈದಾನ, ಕಾಲೇಜು ಕ್ಯಾಂಟೀನ್ ಈ ಕಾಲೇಜಿನ ವಿಶಿಷ್ಟತೆ ಎನ್ನಬಹುದು.
ಇನ್ನು ಈ ಇಂಟಿಗ್ರೇಟೆಡ್ ಕೋಚಿಂಗ್ಗೆ ಸೇರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕುವಂತಗಲು ಕೇವಲ 30 ವಿದ್ಯಾರ್ಥಿಗಳನ್ನು ಮಾತ್ರ ಒಂದು ಬ್ಯಾಚ್ಗೆ ಸೇರಿಸಿಕೊಳ್ಳಲಾಗುವುದು. ಇವರನ್ನು ಸೂಪರ್ 30 ಮಟ್ಟದಲ್ಲಿ ತಯಾರು ಮಾಡಲಾಗುವುದು. ಪ್ರತಿದಿನ 5 ಗಂಟೆಗಳ ಕ್ಲಾಸು ಹಾಗೂ 1 ಗಂಟೆಗಳ ಪರೀಕ್ಷೆಯಿರುತ್ತದೆ. ಜೊತೆಗೆ ಹಲವಾರು ವರ್ಷಗಳ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ವಿಧಾನ ತಿಳಿಸಿಕೊಡುವುದು. ಕೋಚಿಂಗ್ ಪಿಯುಸಿ ಬೋರ್ಡ್ ಮಟ್ಟದಿಂದ ಆರಂಭಿಸಿ ಕರ್ನಾಟಕ ಸಿಇಟಿ ಕೊನೆಗೆ ನೀಟ್ ಮತ್ತು ಜೆಇಇ ಮಟ್ಟಕ್ಕೆ ತಲುಪಿಸಲಾಗುವುದು. ದಶಕಗಳ ಕಾಲ ಮಂಗಳೂರಿನ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಿ ಅತ್ಯುತ್ತಮ ಫಲಿತಾಂಶ ಒದಗಿಸಿರುವ ನುರಿತ ಪ್ರಾಧ್ಯಾಪಕರ ತಂಡ ಈ ಕೋಚಿಂಗ್ನ ನೇತೃತ್ವ ವಹಿಸಿಕೊಂಡಿದೆ.
ಮಂಗಳೂರಿನ ಹೃದಯ ಭಾಗದಲ್ಲಿ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಕಲಿಕಾ ವ್ಯವಸ್ಥೆಯನ್ನು ಗಮನಿಸಲು ಅಧ್ಯಾಪಕರು ಹಾಗೂ ವಾರ್ಡ್ನ್ಗಳು ದಿನ ರಾತ್ರಿ ವಾಸ್ತವ್ಯವಿದ್ದಾರೆ. ಜೊತೆಗೆ ವೈದ್ಯರ ಸೌಲಭ್ಯವು ಲಭ್ಯವಿದೆ.
ಕಳೆದ ಹಲವಾರು ವರ್ಷಗಳಿಂದ ಸಕಲೇಶಪುರ, ಹಾಸನ, ಮಡಿಕೇರಿ, ವಿರಾಜಪೇಟೆ, ಮೈಸೂರು, ಚಿತ್ರದುರ್ಗ, ಬೀದರ್, ಗುಲ್ಬರ್ಗ ಹಾಗೂ ಮೇಘಾಲಯ, ಪಶ್ಚಿಮಬಂಗಾಳ ಇಲ್ಲಿನ ಮಕ್ಕಳು ಡಾ. ಶಂಕರ ಅಡ್ಯಂತಾಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬರೀ ಪಾಠಪ್ರವಚನ ಮಾಡಿ ಶೇ 80ರಿಂದ 85% ಫಲಿತಾಂಶ ಪಡೆಯುವ ಪ್ರತಿಷ್ಠಿತ ವೃತ್ತಿಪರ ಕಾಲೇಜುಗಳ ನಡುವೆ, ವಿನೂತನ ಶೈಲಿಯಲ್ಲಿ ಸೀಮಿತ ಅವಧಿಗೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಪಾಠ ಪ್ರವಚನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸದೆ ಅವರ ಸರ್ವತೋಮುಖ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಿ ಎನ್ನೆಸ್ಸೆಸ್, ಕ್ರೀಡೆ, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಅಳವಡಿಸಿಕೊಂಡು ಪ್ರತಿ ವರ್ಷ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯೊಂದಿಗೆ ತೇರ್ಗಡೆಯಾಗುತ್ತಿದ್ದು ಸರಾಸರಿ 96 ರಿಂದ 99 ಶೇಕಡಾ ಫಲಿತಾಂಶದೊಂದಿಗೆ ಅತ್ಯಂತ ಶಿಸ್ತು ಬದ್ಧ ಶಿಕ್ಷಣಕ್ಕೆ ಮಾದರಿಯಾದ ಸಂಸ್ಥೆ ಡಾ. ಎನ್.ಎಸ್.ಎ.ಎಮ್ ಪಿಯು ಕಾಲೇಜು.
ಕಾಲೇಜಿನಲ್ಲಿ ಕೊರೊನಾ ಮುನ್ನಚ್ಚೆರಿಕೆಯ ಕ್ರಮಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಿಕ್ಷಣ ನೀಡುವ ಯೋಜನೆ ಸಿದ್ಧವಾಗಿದ್ದು, ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಇಂಟಿಗ್ರೇಟೆಡ್ ಕೋಚಿಂಗ್ ಆರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು ಈ ಕೆಳಗಿನ ವಿಳಾಸದಲ್ಲಿ ಆನ್ಲೈನ್ ಅಥವಾ ನೇರ ದಾಖಲಾತಿಗಾಗಿ ಕಾಲೇಜನ್ನು ಸಂಪರ್ಕಿಸಬಹುದು.