ಉಡುಪಿ, ಜೂ. 26(DaijiworldNews/HR): ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋ ರೂಂ ಹವಂಜೆ ಗ್ರಾಮ ಪಂಚಾಯತ್ ಪ್ರದೇಶದ ಕೀಲಿಂಜೆ ವಾರ್ಡ್ನ ಜನರಿಗೆ ಪಡಿತರ ಕಿಟ್ಗಳನ್ನು ವಿತರಿಸಲಾಯಿತು.
ಸಮಾಜ ಸೇವಕ ನಿತ್ಯಾನಂದ ಅವರು ಅಗತ್ಯವಿರುವವರಿಗೆ ಆಹಾರ ಕಿಟ್ಗಳನ್ನು ನೀಡಿ ಬಳಿಕ ಮಾತನಾಡಿ, "ಲಾಕ್ಡೌನ್ ಅವಧಿಯಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉತ್ತಮ ಕೆಲಸ ಮಾಡುತ್ತಿದೆ. ಉಡುಪಿಯಲ್ಲಿನ ಅನೇಕ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಮಲಬಾರ್ ಗೋಲ್ಡ್ & ಡೈಮಂಡ್ಸ್ ಈ ಮನೆಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸಹಾಯ ಮಾಡಲು ಪ್ರಾರಂಭಿಸಿತು. ಇದು ಉದಾತ್ತ ಕೆಲಸ. ಆಹಾರ ಕಿಟ್ನ ಹೊರತಾಗಿ, ಅವರು ಮನೆಗಳನ್ನು ನಿರ್ಮಿಸಲು ಮತ್ತು ಆರ್ಥಿಕವಾಗಿ ಹಿಂದುಳಿದ ಹುಡುಗಿಯರ ಮದುವೆಗೆ ಸಹ ಸಹಾಯ ಮಾಡುತ್ತಾರೆ" ಎಂದರು.
ಇನ್ನು ಸಂಜೆವಿನಿ ತಂಡದ ಶಿಫಾರಸಿನ ಮೇರೆಗೆ ಬದನಿಡಿಯೂರ್ ಗ್ರಾಮ ಪಂಚಾಯಿತಿಯಲ್ಲಿರುವ ಕೋವಿಡ್ ವಾರಿಯರ್ಸ್ ಗಳಿಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಡುಪಿ ಶೋ ರೂಂ ಜಿಲ್ಲೆಯಾದ್ಯಂತ 5,400 ಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ಅಗತ್ಯವಿರುವವರಿಗೆ ವಿತರಿಸಿದೆ. ಆಹಾರದ ಕಿಟ್ಗಳ ಹೊರತಾಗಿ, ಅವರು ಸಿಎಸ್ಆರ್ ಚಟುವಟಿಕೆಗಳ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಯುವತಿಯರ ಮದುವೆಗಾಗಿ, ಮನೆಗಳನ್ನು ನಿರ್ಮಿಸುವಲ್ಲಿ ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ.
ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕೋಟ್ಯಾನ್, ಆಶಾ, ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯ ಹಬೀಬ್, ಅಜಯ್ ಕುಮಾರ್ ಪೂಜಾರಿ, ನಿತೇಶ್ ಶೆಟ್ಟಿ, ಬದನಿಡಿಯೂರ್ ಗ್ರಾಮ ಪಂಚಾಯತ್ ಪಿಡಿಒ ಮಾಲತಿ ಉಪಾಧ್ಯಕ್ಷ ತಾರಾ ಪ್ರಭಾಕರ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋ ರೂಂ ಮುಖ್ಯಸ್ಥ ಹಫೀಜ್ ರೆಹಮಾನ್. ಜಿಆರ್ಎಂ ರಾಘವೇಂದ್ರ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.