ಕಾರ್ಕಳ, ಜೂ. 26(DaijiworldNews/HR): ನಗರದ ಅನಂತಶಯನ ಶ್ರೀ ಕ್ಷೇತ್ರದ ಪರಿಸರದ ಕಟ್ಟಡವೊಂದರ ತಳಭಾಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಸಾಮಾಜಿಕ ಕಾರ್ಯಕರ್ತರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶ ಮೂಲದವರಾಗಿರುವ ರವೀಂದ್ರರ್(35) ಗಾಯಾಳು.
ತಲೆಭಾಗದಿಂದ ತೀವ್ರ ರಕ್ತಸಾವ್ರವಾಗಿ ಸ್ಥಳದಲ್ಲಿಯೇ ಬಿದ್ದುಕೊಂಡಿದ್ದರು. ಇದನ್ನು ಗಮನಿಸಿದ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಹಾಗೂ ಇತರರು ಅಂಬುಲೆನ್ಸ್ನಲ್ಲಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳು ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಘಟನೆಗೆ ನಿಖರ ಕಾರಣವೆನ್ನೆಂಬುವುದು ತಿಳಿದುಬಂದಿಲ್ಲ.