ಕಾರ್ಕಳ, ಜೂ. 26(DaijiworldNews/HR): ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಆರ್ಐಡಿ 3182 ಜಿಲ್ಲಾ ಕಾರ್ಯಕ್ರಮ ಸಹಕಾರಿತ ಇದರ ಅಂಗವಾಗಿ ಮುನಿಯಲು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಐದು ಕಂಪ್ಯೂಟರ್ಗಳ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷೆ ರೇಖಾ ಉಪಾಧ್ಯಾಯ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಶಶಿಕಲಾ ಕೆ ಹೆಗ್ಡೆ, ಸೌಜನ್ಯ ಉಪಾಧ್ಯಾಯ , ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ಕಾಲೇಜಿನ ಪ್ರಾಂಶುಪಾಲ ಸತೀಶ್ ಪೈ , ಉಪನ್ಯಾಸಕ ದತ್ತ ಕುಮಾರ್ , ಉದ್ಯಮಿಗಳಾದ ಸಮೃದ್ಧಿ ಪ್ರಕಾಶ್ ಶೆಟ್ಟಿ ಹಾಗೂ ಕಾಲೇಜು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.