ಮಂಗಳೂರು, ಜೂ 26 (DaijiworldNews/PY): ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಅಂಬಾ ಭವಾನಿ ಭಜನಾ ಮಂದಿರ, ಜಲ್ಲಿಗುಡ್ಡೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೇಶವಜಿ ರಾವ್ ಹಾಗೂ ಅತಿಥಿಯಾಗಿ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ನ ನೃತ್ಯ ಶಿಕ್ಷಕ ತರುಣ್ರಾಜ್ ವಹಿಸಿದ್ದರು.
ನೃತ್ಯ ಕಾರ್ಯಕ್ರಮದಲ್ಲಿ ಜಾನಪದ, ಫಿಲ್ಮಿ, ಭಕ್ತಿ- ಭಾವ ಹಾಗೂ ಯಕ್ಷಗಾನದ ಹಾಡಿಗೆ ಸ್ಪರ್ಧೆ ನಡೆದಿದ್ದು, ಎಲ್ಲಾ ವಿಭಾಗದಲ್ಲಿವಿಜೇತ ವಿದ್ಯಾರ್ಥಿಗಳಾದ ಗೃಹತಿ ಎ.ರಾವ್, ರಿಧಿ, ಆದ್ಯ ಎಸ್. ಪೂಜಾರಿ, ಯುಕ್ತಿಶ್ರೀ, ಖತ್ವ ಎಚ್.ಪಿ., ಮಾನ್ವಿ ಜಿ. ಕೊಟ್ಟಾರಿ, ಅದ್ವಿತಿ, ತೃಷಾ ಡಿ.ರಾವ್, ಆರ್.ಕೆ. ತೇಜಸ್ವಿ, ಸಿಂಚನ, ಸಮೃದ್ದಿ, ದೀಪ್ತಿರಾವ್, ಆಕಾಂಕ್ಷ ಜೆ ಕೋಟ್ಯಾನ್, ಐಶ್ವರ್ಯ ಆರ್. ಪೂಜಾರಿ, ಸ್ತುತಿ, ಅನ್ವಿತಾ, ನಿಹಾರಿಕಾ ಗಿರೀಶ್ ಜಾದವ್ ಹಾಗೂ ಕೆ.ಎಸ್. ಧನ್ವಿ ಎಲ್ಲರಿಗೂ ನಗದು ಬಹುಮಾನ ಹಾಗೂ ಸ್ಮರಣಿಕೆಯೊಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ಪ್ರದಾನ ಕಾರ್ಯದರ್ಶಿ ಕೆ.ಸಿ.ಹರಿಶ್ಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಕುಮಾರ್ ಸ್ವಾಗತಿಸಿ, ಆನಂದ್ ರಾವ್ ಧನ್ಯವಾದವಿತ್ತರು.
ಈ ಸಂದರ್ಭ ಕಲಾಕೇಂದ್ರದ ಅಧ್ಯಕ್ಷ ಪ್ರಜ್ವಲ್ ಡಿ.ಕೆ., ಯತೀಶ್, ನಾಗೆಶ್ ಎಂ., ವಿಶ್ರಾಂತ್, ಸುಮಲತಾ, ಉಷಾ, ಸಂದೀಪ್, ಗಣೇಶ್ ಕೊಟ್ಟಾರಿ, ಪ್ರೇಮಭವಾನಿ ಉಪಸ್ಥಿತರಿದ್ದರು.