ಕಾಸರಗೋಡು, ಜೂ 26 (DaijiworldNews/PY): ಏಣಿಯಿಂದ ಬಿದ್ದು ಕಾರ್ಮಿಕರೋರ್ವ ಮೃತಪಟ್ಟ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಶಿರಿಯದಲ್ಲಿ ನಡೆದಿದೆ.
ಶಿರಿಯ ಗುಡ್ಡೆಯ ಮಾಂಕು (47) ಮೃತಪಟ್ಟವರು.
ಶಿರಿಯ ಸಮೀಪ ಮನೆಯೊಂದರ ದುರಸ್ತಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಮಳೆಗೆ ಮನೆ ಹಾನಿಗೊಂಡಿತ್ತು. ಮನೆಯ ದುರಸ್ತಿ ಸಂದರ್ಭದಲ್ಲಿ ಏಣಿ ಮೂಲಕ ಕಲ್ಲನ್ನು ಎತ್ತಿಕೊಂಡು ಹತ್ತುತ್ತಿದ್ದಾಗ ಏಣಿ ಸಹಿತ ಜಾರಿ ಬಿದ್ದು ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಮಾಂಕು ಅವರನ್ನು ಬಂದ್ಯೋಡಿನ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.
ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.