ಉಡುಪಿ, ಜೂ. 26(DaijiworldNews/HR): ಉಡುಪಿ ಸಿಟಿ ಬಸ್ಸು ನಿಲ್ದಾಣದಲ್ಲಿ ಗಾಯಾಳಾಗಿ, ರಕ್ತದ ಮಡುವಿನಲ್ಲಿ ಅಸಹಾಯಕನಾಗಿ ಬಿದ್ದಿರುವ ಅಪರಿಚಿತ ವ್ಯಕ್ತಿಯನ್ನು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶನಿವಾರ ನಡೆದಿದೆ.
ಗಾಯಾಳುವನ್ನು ಮಹಂತೇಶ (40 ವರ್ಷ), ವಲಸೆ ಕಾರ್ಮಿಕ ಎಂದು ಶಂಕಿಸಲಾಗಿದೆ, ವಿಳಾಸ ತಿಳಿದು ಬಂದಿಲ್ಲ.
ಈ ಘಟನೆಯ ವಿವರ ಇನ್ನಷ್ಟೆ ತಿಳಿಯಬೇಕಿದೆ.
ವಾರಸುದಾರರು ತುರ್ತಾಗಿ, ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.