ಕೋಟ, ಜೂ 26 (DaijiworldNews/MS):ಸಾಲಿಗ್ರಾಮ ಕಡೆಯಿಂದ ಮಂಗಳೂರು ಕಡೆಗೆ ಒಂದು ಬುಲೇರೋ ಪಿಕ್ಅಪ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಕೋಟ ಪಿಎಸ್ ಐ ಸಂತೋಷ್ ಬಿ ಪಿ ಹಾಗೂ ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಜಂಕ್ಷನ್ ಬಳಿಯಲ್ಲಿ ಶುಕ್ರವಾರ ಬೆಳಿಗ್ಗೆ ತಪಾಸಣೆ ನೆಡೆಸುವಾಗ ಜಾನುವಾರು ತುಂಬಿದ ಬುಲೇರೋ ಪಿಕ್ಅಪ್ ಗೂಡ್ಸ್ ವಾಹನವು ಪೊಲೀಸ್ ರನ್ನು ನೋಡಿ ಸುಮಾರು 50 ಮೀಟರ್ ಹಿಂದೆ ನಿಲ್ಲಿಸಿ ಪರಾರಿಯಾದ ಘಟನೆ ನಡೆದಿದೆ.
ಪೊಲೀಸರಿಗೆ ಈ ವಾಹನದ ಮೇಲೆ ಸಂಶಯ ಬಂದಿದ್ದು, ಸಿಬ್ಬಂದಿಗಳೊಂದಿಗೆ ವಾಹವನ್ನು ತಪಾಸಣೆ ಮಾಡಲು ಹೊರಟಾಗ ವಾಹನದಲ್ಲಿದ್ದ ಮೂವರು ವ್ಯೆಕ್ತಿಗಳು ಓಡಿ ಹೋಗಿದ್ದು, ಹತ್ತಿರಕ್ಕೆ ಹೋಗಿ ನೋಡವಾಗ ಪಿಕ್ ಅಪ್ ವಾಹನದಲ್ಲಿ ಒಂದು ದನ, ಎರಡು ಗಂಡು ಕರು, ಹಾಗೂ ಎರಡು ಕೋಣವನ್ನು ಹಿಂಸಾತ್ಮಕ ರೀತಿಯಲ್ಲಿ ಕತ್ತಿಗೆಗೆ ನೈಲಾನ್ ರೋಪ್ ಹಗ್ಗವನ್ನು ಕಟ್ಟಿ ಅವುಗಳಿಗೆ ಆಹಾರ ಮೇವು ನೀರು ನೀಡದೆ ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.
ಇವರಿಗೆ ಜಾನುವಾರುಗಳನ್ನು ನೀಡುತಿದ್ದ ದಲ್ಲಾಳಿ ಕಾವಡಿ ಸತೀಶ್ ಪೂಜಾರಿಯನ್ನು ಬಂದಿಸಲಾಗಿದೆ. ಹಾಗೂ 3 ಜನ ಅಪರಿಚಿತ ವ್ಯಕ್ತಿಗಳು ಹಾಗೂ ಸತೀಶ್ ಪೂಜಾರಿ ಕಾವಡಿ ವಿರುದ್ದ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 379 IPC,ಜೊತೆಗೆ ಕಲಂ 8.9.11 ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣ ಕಾಯ್ದೆ 1964 ಮತ್ತು ಕಲಂ 11 (1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.