ಕುಂದಾಪುರ, ಜೂ 25 (DaijiworldNews/PY): ತೆಕ್ಕಟ್ಟೆಯಲ್ಲಿ ಅಪರೂಪದ ಪುನುಗು ಬೆಕ್ಕು ಪತ್ತೆಯಾಗಿದ್ದು, ಬಾವಿಗೆ ಬಿದ್ದಿರುವ ಪುನುಗು ಬೆಕ್ಕನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಜೂ.25ರ ಶುಕ್ರವಾರದಂದು ತೆಕ್ಕಟ್ಟೆ ಸೀತಾರಾಮ ಆಚಾರ್ಯ ಅವರ ಮನೆ ಬಾವಿಗೆ ಈ ಪುನುಗು ಬೆಕ್ಕು ಬಿದ್ದಿದ್ದು, ಸ್ಥಳೀಯ ಕೃಷಿಕ ರಾಘವೇಂದ್ರ ದೇವಾಡಿಗ ಅವರು ಬೆಕ್ಕನ್ನು ರಕ್ಷಿಸಿದ್ದಾರೆ.
ಪುನುಗು ಬೆಕ್ಕು ಇತ್ತೀಚೆಗೆ ತೀರಾ ಅಪರೂಪವಾಗಿದೆ. ಅಪೂರ್ವವಾದ ಈ ಪ್ರಬೇಧ ಅವನತಿಯ ಅಂಚನ್ನು ಸೇರಿದೆ.