ಉಡುಪಿ, ಜೂ.25 (DaijiworldNews/HR): ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿದ್ದು ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಝಮೀರ್ ಅವರು ನೇಮಕಗೊಂಡಿದ್ದಾರೆ.
ರಾಜ್ಯಾಧ್ಯಕ್ಷ ಎಂ.ಜಿ ಅಖಿಲ್ ಅಹಮ್ಮದ್ ಈ ನೇಮಕಾತಿಯನ್ನು ಮಾಡಿದ್ದು, ಜಿಲ್ಲಾ ಸಮಿತಿಯ ವಿವಿಧ ಹುದ್ದೆಗಳಿಗೆ ಕೂಡ ನೇಮಕಾತಿ ನಡೆದಿದೆ.
ರಾಜ್ಯಾಧ್ಯಕ್ಷರ ಸೂಚನೆಯಂತೆ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ನ ಉಡುಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಆಕಾಶ್ ಪೂಜಾರಿ, ಮಹಮ್ಮದ್ ಅಕ್ರಂ, ಪ್ರಧಾನ ಕಾರ್ಯದರ್ಶಿಗಳಾಗಿ ಎಲ್ ಸ್ಟನ್ ನೊರೊನ್ಹಾ ಅಮಿತ್ ಕುಮಾರ್, ಕೀರ್ತನ್ ಕುಮಾರ್, ಕ್ರಿಸ್ಟೋನ್ ಶೆಲ್ಡನ್ ಅರೋನ್, ಮಿಸ್ಬಾ, ಗಗನ್ ಆರ್ ಸಾಲ್ಯಾನ್, ಕಾರ್ಯನಿರತ ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಫಯಾಲ್, ಕಾರ್ಯದರ್ಶಿಗಳಾಗಿ ವಿಘ್ನೇಶ್ ಶೆಟ್ಟಿ, ರೋಹಿತ್ ಪೂಜಾರಿ, ಮಹಮ್ಮದ್ ನಿಯಾಜ್ ರವರನ್ನು ಜಿಲ್ಲಾಧ್ಯಕ್ಷರು ನೇಮಿಸಿದ್ದಾರೆ.
ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಉತ್ಸಾಹಿ ಯುವಕರ ಸಮಿತಿಯು ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ ಎಂದು ಜಿಲ್ಲಾಧ್ಯಕ್ಷ ಮಹಮ್ಮದ್ ಝಮೀರ್ ತಿಳಿಸಿದ್ದಾರೆ.