ಮಂಗಳೂರು, ಜೂ. 24 (DaijiworldNews/SM): ದ.ಕ. ಜಿಲ್ಲೆಯಲ್ಲಿ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದೆ. ಆದರೆ, ಸೋಂಕಿನ ಪರಿಣಾಮ ಇಳಿಕೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿರಲಿದೆ.
ಆರೋಗ್ಯ ಸೇವೆಗಳನ್ನು ಹೊರತು ಪಡಿಸಿದರೆ, ಬಹುತೇಕ ಎಲ್ಲಾ ಸೇವೆಗಳು ಜಿಲ್ಲೆಯಲ್ಲಿ ಬಂದ್ ಆಗಿರಲಿದೆ. ಹಾಲು ಹಾಗೂ ಪೇಪರ್ ಅಂಗಡಿ ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿ ತೆರೆಯಲು ಜಿಲ್ಲೆಯಲ್ಲಿ ಅವಕಾಶವಿಲ್ಲ. ವಾರಾಂತ್ಯ ಕರ್ಫ್ಯೂ ಪರಿಣಾಮಕಾರಿ ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ, ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ.
ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಸಂದರ್ಭ ಏನಿದೆ? ಏನಿರಲ್ಲ?
ಶುಕ್ರವಾರ ಸಂಜೆ 7ರಿಂದ ವಾರಾಂತ್ಯ ಕರ್ಫ್ಯೂ ಜಾರಿ
ಸೋಮವಾರ ಬೆಳಿಗ್ಗೆ 7 ಗಂಟೆಯ ತನಕ ವೀಕೆಂಡ್ ಕರ್ಫ್ಯೂ
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಹಾಲಿನ ಅಂಗಡಿ, ದಿನಪತ್ರಿಕೆ ವಿತರಣೆಗೆ ಮಾತ್ರ ಅವಕಾಶ
ಇತರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ
ವಾರಾಂತ್ಯ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿಗಳು ಕೂಡ ಬಂದ್
ತುರ್ತು ಅಗತ್ಯ ಆರೋಗ್ಯ ಸೇವೆಗಳಿಗೆ ಅವಕಾಶ
ಶನಿವಾರದಂದು ಸರಕಾರಿ ಕಚೇರಿಗಳು ಕಾರ್ಯಾಚರಿಸಲಿವೆ
24 ಗಂಟೆ ಕಾರ್ಯಾಚರಿಸುವ ಸಂಸ್ಥೆ, ಕಂಪೆನಿಗಳಿಗೆ ಅವಕಾಶ
ತುರ್ತು ಸಂದರ್ಭದಲ್ಲಿ ರೋಗಿಗಳು, ಅವರ ಪರಿಚಾರಕರು ಸಂಚಾರ ನಡೆಸಬಹುದು
ಲಸಿಕೆ ಪಡೆಯುವವರಿಗೆ ದಾಖಲೆ ತೋರಿಸಿ ತೆರಳಬಹುದು
ರೆಸ್ಟೋರೆಂಟ್, ಹೊಟೇಲ್ ಗಳಿಂದ ಪಾರ್ಸೆಲ್ ಗೆ ಮಾತ್ರ ಅವಕಾಶ
ದೂರ ಪ್ರಯಾಣದ ಅಂತರ್ ಜಿಲ್ಲಾ ಬಸ್, ರೈಲು, ವಿಮಾನ ಸಂಚಾರವಿದೆ
ಸೂಕ್ತ ದಾಖಲೆ, ಟಿಕೆಟ್ ತೋರಿಸಿ ನಿಲ್ದಾಣಗಳಿಗೆ ತೆರಳಲು ಅನುಮತಿ
ನಿಗದಿಯಾಗಿರುವ ವಿವಾಹಗಳಿಗೆ 25 ಜನರ ಮಿತಿಯಲ್ಲಿ ಮನೆಯಲ್ಲೇ ನಡೆಸಲು ಅವಕಾಶ
5 ಜನರ ಪರಿಮಿತಿಯಲ್ಲಿ ಶವಸಂಸ್ಕಾರ, ಅಂತ್ಯಕ್ರಿಯೆಗೆ ಅನುಮತಿ