ಕಾರ್ಕಳ, ಜೂ 24 (DaijiworldNews/PY): "ಕೊರೊನಾ ಸಂಕಷ್ಟದ ದಿನದಿನಗಳಲ್ಲಿ ಸರಕಾರವು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆನ್ ಲೈನ್ ತರಗತಿಯು ಅತ್ಯಂತ ಸಕಾಲಿಕ ಯೋಜನೆಯಾಗಿದೆ. ಸ್ಮಾರ್ಟ್ ತರಗತಿಗಳು ಹಾಗೂ ಪಿಸಿ ಟ್ಯಾಬ್ನ ಪೂರ್ಣ ಪ್ರಯೋಜನವನ್ನು ಪಡೆದು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು" ಎಂದು ಎಂಪಿಎಂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ಯುವ ಉದ್ಯಮಿ ಸುರೇಶ್ ಅತ್ತೂರು ಹೇಳಿದರು.
ಸಾಫ್ಟ್ ಕರ್ನಾಟಕ ಯೋಜನೆಯಡಿಯಲ್ಲಿ ಕರ್ನಾಟಕ ಎಲ್.ಎಮ್.ಎಸ್.ನ, ಐ.ಸಿ.ಟಿ ತರಗತಿಗಳ ಉದ್ಘಾಟನೆ ಹಾಗೂ ಪಿಸಿ ಟ್ಯಾಬ್ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, "ಟ್ಯಾಬ್, ಪಿಸಿಯನ್ನು ವಿದ್ಯಾಭ್ಯಾಸದ ಆನ್ಲೈನ್ ತರಗತಿಗಳಿಗೆ ಹಾಗೂ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸರಕಾರದ ನಿರ್ದೇಶನದಂತೆ ಸದುಪಯೋಗ ಪಡಿಸಬೇಕು" ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಾದ ಪೈಕಿ ಧನುಷ್, ಅನುಷಾ ಶೆಣೈ ಟ್ಯಾಬ್ಗಳನ್ನು ಪಡೆದ ತಮ್ಮ ಅಭಿಮತ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಧನುಷ್, ಮೆಹಕ್, ಪವನ್,ರಶ್ಮಿ , ವಿಜಯ, ಸಚಿನ್, ಆಮಿಷ್ ಅಹ್ಮದ್, ವರ್ಷ,ಅನುಷಾ ಶೆಣೈ, ಶ್ರಾವ್ಯ ಇವರುಗಳು ಅತಿಥಿಗಳಿಂದ ಸಾಂಕೇತಿಕವಾಗಿ ಪಿಸಿ ಟ್ಯಾಬ್ ಪಡೆದರು.
ವಿದ್ಯಾರ್ಥಿ ಅನಿಷಾ ಪ್ರಾರ್ಥನೆಗೈದರು. ಐಟಿ ಸಂಚಾಲಕ ವೆಂಕಟೇಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಯೋಗೆಶ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿ ವೈದ್ಯ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕಿ ಜ್ಯೋತಿ ಎಲ್ ಜನ್ನೆ ಧನ್ಯವಾದವಿತ್ತರು.
ಸಹಾಯಕ ಪ್ರಾಧ್ಯಾಪಕ ನವೀನ್, ಮಂಜುನಾಥ್, ಯುವ ಉದ್ಯಮಿ ಸುರೇಶ್ ಅತ್ತೂರು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಉಪಸ್ಥಿತರಿದ್ದರು.