ಉಡುಪಿ, ಜೂ 24(DaijiworldNews/PY): ಸ್ಕೂಟರ್ನಲ್ಲಿರಿಸಿದ್ದ ಬ್ಯಾಗ್ ಕದ್ದು ಅದರಲ್ಲಿದ್ದ ಚೆಕ್ಗಳನ್ನು ದುರ್ಬಳಕೆ ಮಾಡಿ 10 ಲಕ್ಷ ರೂ. ವಂಚಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಆರೋಪಿಯನ್ನು ಬ್ರಹ್ಮಾವರ ದೂಪದಕಟ್ಟೆ ನಿವಾಸಿ ಗೋಪಾಲ ಅಮೀನ್ (55) ಎಂದು ಗುರುತಿಸಲಾಗಿದೆ.
ಈತ 2019ರ ಜುಲೈ 13ರಂದು ಕರಾವಳಿ ಬೈಪಾಸ್ನ ಬಳಿ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾದ ಉಡುಪಿಯ ತೋನ್ಸೆ ಗ್ರಾಮದ ನಿವಾಸಿ ಉದಯ ಕುಮಾರ (48) ಎಂಬವರ ಸ್ಕೂಟರ್ನಲ್ಲಿರಿದ್ದ ಬ್ಯಾಗ್ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ ಚೆಕ್ ಬುಕ್ ಮತ್ತು ಸ್ಟಾರ್ ಪ್ಲಸ್ ಕಂಪೆನಿಯ ಬಾಂಡ್ಗಳಿದ್ದ ಬ್ಯಾಗ್ ಕಳವು ಮಾಡಿ ಅದರಲ್ಲಿದ್ದ ಚೆಕ್ಗಳನ್ನು ದುರ್ಬಳಕೆ ಮಾಡಿ, 10 ಲಕ್ಷ. ರೂ ವಂಚಿಸಿದ್ದಾನೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.