ಉಡುಪಿ, ಜೂ.24 (DaijiworldNews/HR): ಸರ್ಕಾರವು ನೀಡಿರುವ ಅನ್ಲಾಕ್ ವಿನಾಯಿತಿಯನ್ನು ಅನೇಕರು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ" ಎಂದು ಉಡುಪಿ ಡಿಸಿ ಜಿ ಜಗದೀಶ್ ಎಚ್ಚರಿಸಿದ್ದಾರೆ.
"ಮದುವೆಗೆ 40 ಅತಿಥಿಗಳು ಮಾತ್ರ ಅವಕಾಶವಿತ್ತು ಆದರೆ ಸೀಮಿತ ಸಂಖ್ಯೆಯ ಅತಿಥಿಗಳಿಗಿಂತ ಹೆಚ್ಚಿನವರು ಮದುವೆಗಳಿಗೆ ಹಾಜರಾಗುತ್ತಿದ್ದಾರೆ. ಹೋಟೆಲ್ಗಳಿಗೆ ಸಂಜೆ 5 ಗಂಟೆಯವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿದೆ ಮತ್ತು 6 ಗಂಟೆಯವರೆಗೆ ಅಲ್ಲ. ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಮಾರ್ಗಸೂಚಿಯಲ್ಲಿ ಅನುಮತಿ ಇಲ್ಲ. ಆದರೆ ಪ್ರತಿದಿನ ನೂರಾರು ವಿವಿಧ ಪಕ್ಷ ಮತ್ತು ಸಂಸ್ಥೆಗಳ ಕಾರ್ಯಕ್ರಮಗಳು, ಪ್ರತಿಭಟನೆ ಮತ್ತು ಹಲವಾರು ಇತರ ಸಾಮಾಜಿಕ ಕೂಟಗಳ ಚಟುವಟಿಕೆಗಳ ಪತ್ರಿಕಾ ವರದಿಗಳನ್ನು ನೋಡುತ್ತಿದ್ದೇವೆ" ಎಂದರು.
ಇನ್ನು ಸಂಘಟಕರು ಸಾರ್ವಜನಿಕ ಆರೋಗ್ಯದೊಂದಿಗೆ ಆಡುತ್ತಿದ್ದು, ಕಾನೂನು ಎಲ್ಲರಿಗೂ ಸಮಾನವಾಗಿದೆ. ಜಿಲ್ಲಾಧಿಕಾರಿಯಾಗಿ ಆಗಿ ನಾನು ನಿಯಮಗಳನ್ನು ಅನುಸರಿಸಿದರೆ ಜನರು ನಿಯಮ ಪಾಲಿಸುತ್ತಾರೆ ಜನ ಪ್ರತಿನಿಧಿಗಳು ನಿಯಮಗಳನ್ನು ಅನುಸರಿಸಿದರೆ ಅವರ ಹಿಂಬಾಲಕರು ನಿಯಮ ಪಾಲನೆ ಮಾಡುತ್ತಾರೆ. ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಯಾರಾದರೂ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಅನುಮತಿ ಇಲ್ಲದೆ ಆಯೋಜಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಜುಲೈ 7 ರವರೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ಯಾರು ಕಾನೂನನ್ನು ಪಾಲಿಸುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.