ಕಾರ್ಕಳ, ಜೂ.24 (DaijiworldNews/HR): ಮಳೆಗಾಲ ಆರಂಭವಾಗುತ್ತಿದ್ದಂತೆ ಗದ್ದೆ, ಹೊಲಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕತೆಯನ್ನು ಪ್ರತಿಭಿಂಬಿಸುವ ಪಾಡ್ದನಗಳು ಕೇಳಿಬರುತ್ತಿದ್ದು, ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಈ ವರ್ಷದ ಕೃಷಿಕಾಯಕದ ದೃಶ್ಯಗಳನ್ನು ಕಾಣಬಹುದಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಗದ್ದೆ, ಹೊಲಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕತೆಯನ್ನು ಪ್ರತಿಭಿಂಬಿಸುವ ಪಾಡ್ದನಗಳು ಕೇಳಿಬರುತ್ತದೆ. ತಲಾತಲಾಂತರಗಳಿಂದ ಬಾಯಿಂದ ಬಾಯಿ ಅನುಕರಣೆಗೊಂಡಿರುವ ಪಾಡ್ದನವು ಮೌಖಿಕ ಸಾಹಿತ್ಯವೆಂದು ಪ್ರಚಲಿತ ಪಡೆದಿದ್ದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಪುರುಷರು ಉರಲ್ ಹಾಡಿದರೆ, ಮಹಿಳೆಯರು ನೇಜಿ ನೆಡುವಾಗ, ನೇಜಿ ತೆಗೆಯುವಾಗ ಸಂದಿ, ಕಬಿತೆ, ಪಾಡ್ದನಗಳನ್ನು ಹಾಡುವುದು ಕಂಡುಬರುತ್ತದೆ.
ಇನ್ನು ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷಾವಧಿಯಲ್ಲಿ ಕೃಷಿಕಾಯಕದಲ್ಲಿ ತೊಡಗಿಸಿಕೊಂಡವರ ಕುರಿತು ರಾಮ್ ಅಜೆಕಾರು ಹಾಗೂ ಅರುಣ್ ಭಟ್ ಅವರು ಚಿತ್ರೀಕರಿಸಿದ ದೃಶ್ಯಾವಳಿಗಳು ಇದಾಗಿದೆ.