ಬೈಂದೂರು, ಜೂ. 23 (DaijiworldNews/SM): ಹೊಳೆಯ ದಾರಿಯಾಗಿ ನಡೆದುಕೊಂಡು ಹೋದ ಯುವಕ ಹೊಳೆಯಲ್ಲಿ ನಾಪತ್ತಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸುಮನಾವತಿ ನದಿಯಲ್ಲಿ ಜೂನ್ ೨೩ರ ಬುಧವಾರದಂದು ನಡೆದಿದೆ.
ವ್ಯಕ್ತಿ ಚಂದ್ರ ನಾಯ್ಕ್(35) ಹೊಳೆಯಲ್ಲಿ ನಾಪತ್ತೆಯಾದ ವ್ಯಕ್ತಿ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.