ಮಂಗಳೂರು,ಜೂ 23 (DaijiworldNews/MS): ಸುರತ್ಕಲ್ ಬಳಿಯ ನ ಚೊಕ್ಕಬೆಟ್ಟು ಮಠದ ರಸ್ತೆ ಬಳಿ ಮನೆಯೊಂದರಲ್ಲಿ ಜೂಜಾಡುತ್ತಿದ್ದ ಮಾಹಿತಿ ಪಡೆದ ಸುರತ್ಕಲ್ ಠಾಣೆಯ ಸಿಎ ಚಂದ್ರಪ್ಪ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಏಳು ಮಂದಿ ವಿರುದ್ಧ ಕೇಸ್ ದಾಖಲಿಸಿ 23 ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದಾರೆ.
ಹನುಮಂತ, ಹನುಮಂತಗೌಡ, ನಿರುಪಾದಪ್ಪ, ವೀರಭದ್ರಗೌಡ. ಸೋಮಣ್ಣ ಪಬ್ಬಲಾರ್, ರಮೇಶ್ ಗೌಡ,ನಿರುಪಾದೆಪ್ಪ ಜ್ಯೋತಿ ಇವರೆಲ್ಲರೂ ಉತ್ತರ ಕರ್ನಾಟಕ ಮೂಲದವರಾಗಿದ್ದು ಜೂಜಾಟದಲ್ಲಿ ನಿರತರಾಗಿದ್ದರು.
ಇನ್ನೊಂದು ಪ್ರಕರಣದಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಎರಡನೇ ಕ್ರಾಸ್ ರಾಯ್ ಕಟ್ಟೆಯಲ್ಲಿ ಭಾನುವಾರ ಸಂಜೆ ಜುಗಾರಿ ಆಡುತ್ತಿದ್ದ ಪೊಲೀಸರು ದಾಳಿ ನಡೆಸಿ ಬಳಸಿದ್ದ 3200 ರೂಗಳನ್ನು ವಶಪಡಿಸಿಕೊಂಡಿದ್ದಾರೆ.