ಕಾಸರಗೋಡು, ಜೂ 23 (DaijiworldNews/MS): ನಾಮಪತ್ರ ಹಿಂತೆಗೆಯಲು ಬಿಜೆಪಿ ಯಿಂದ ಲಂಚ ಪಡೆದಿರುವುದಾಗಿ ಬಹಿರಂಗಪಡಿಸಿದ್ದ ಬಿಎಸ್ಪಿ ಅಭ್ಯರ್ಥಿ ಕೆ. ಸುಂದರ ಅವರರನ್ನು ಕಾಸರಗೋಡಿನ ಹೋಟೆಲ್ ಗೆ ಕರೆ ತಂದು ಕ್ರೈಂ ಬ್ರಾಂಚ್ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ.
ಅಡ್ಕತ್ತಬೈಲ್ ನಲ್ಲಿರುವ ಈ ಹೋಟೆಲ್ ನಲ್ಲಿ ನಾಮಪತ್ರ ಹಿಂದಕ್ಕೆ ಪಡೆಯಲು ಕಡತಕ್ಕೆ ಸಹಿ ಹಾಗೂ ಹಣದ ವ್ಯವಹಾರ ನಡೆದಿತ್ತು . ಈ ಹಿನ್ನಲೆಯಲ್ಲಿ ಸುಂದರರನ್ನು ಕರೆ ತಂದು ಮಾಹಿತಿ ಕಲೆ ಹಾಕಲಾಯಿತು . ಈ ನಡುವೆ ಜೋಡುಕಲ್ಲು ನಲ್ಲಿನ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ಕಚೇರಿಗೆ ಕರೆ ತಂದು ಮಾಹಿತಿ ಸಂಗ್ರಹಿಸಿತ್ತು .
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಜೇಶ್ವರದ ಅಭ್ಯರ್ಥಿಯಾಗಿದ್ದ ಕೆ . ಸುರೇಂದ್ರನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು , ಎಲ್ಲಾ ಮಾಹಿತಿ ಕಲೆ ಹಾಕಿದ ಬಳಿಕ ಮೂವರು ಬಿಜೆಪಿ ಮುಖಂಡರ ವಿರುದ್ದವೂ ಮೊಕದ್ದಮೆ ದಾಖಲಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕ್ರೈಂ ಬ್ರಾಂಚ್ ಡಿ ವೈ ಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ . ಏಪ್ರಿಲ್ ನಲ್ಲಿ ನಡೆದ ಚುನಾವಣೆ ಬಿ ಎಸ್ಪಿ ಅಭ್ಯರ್ಥಿಯಾಗಿದ್ದ ಕೆ . ಸುಂದರ ರಿಂದ ನಾಮಪತ್ರ ಹಿಂತೆಗೆಯಲು ಬಿಜೆಪಿ ಮುಖಂಡರು ಎರಡೂ ವರೆ ಲಕ್ಷ ರೂ . ಹಾಗೂ ಮೊಬೈಲ್ ಫೋನ್ ನ್ನು ನೀಡಿದ್ದರು . ಈ ಬಗ್ಗೆ ಸುಂದರ ಬಹಿರಂಗ ಪಡಿಸಿದ್ದರು.