ಮಂಗಳೂರು: ಜೂ.22 (DaijiworldNews/HR): ಆರ್ಯ ಮರಾಠ ಸಮಾಜ ಸಂಘ ಉತ್ತರ ವಲಯದ ವತಿಯಿಂದ 'ಮನೆಯಲ್ಲಿಯೇ ನೃತ್ಯ ಮಾಡಿ ಬಹುಮಾನ ಗೆಲ್ಲಿ' ಎಂಬ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಸಮುದಾಯದ ವಲಯ ವಿದ್ಯಾರ್ಥಿಗಳನ್ನು ಆಯ್ದು ಅಂಗನವಾಡಿಯಿಂದ ಆರಂಭಗೊಂಡು ಹತ್ತನೆಯ ತರಗತಿವರೆಗಿನ ಮಕ್ಕಳಿಗೆ ನಾಲ್ಕು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರತಿ ವಿಭಾಗಕ್ಕೆ ಪ್ರಥಮ, ದ್ವಿತೀಯ ತ್ರತೀಯ ಬಹುಮಾನ ಘೋಷಿಸಲಾಗಿತ್ತು.
ಇನ್ನು ಅಂಗನವಾಡಿ ಎಲ್ಕೆಜಿ, ಯುಕೆಜಿಗಾಗಿ ಅವರ ಆಯ್ಕೆಯ ಯಾವುದೇ ನೃತ್ಯ, ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ಜನಪದ, ಭಕ್ತಿ- ಬಾವಗೀತೆಗೆ ನೃತ್ಯ, ನಾಲ್ಕರಿಂದ ಏಳನೇ ತರಗತಿ ಮಕ್ಕಳಿಗೆ ಫಿಲ್ಮಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹಾಡಿಗೆ ನೃತ್ಯವನ್ನು ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿತ್ತು. ಈ ಸಂಬಂಧ 19 ವಿದ್ಯಾರ್ಥಿಗಳು ಮನೆಯಲ್ಲಿಯೇ ನರ್ತಿಸಿ ವಿಡಿಯೋ
ಕಳಿಸಿದ್ದರು.
ಈ ಎಲ್ಲಾ ಸ್ಪರ್ಧೆಯ ನಿರ್ವಹಣೆಯನ್ನು ಕ್ರಮವಾಗಿ ಆಶೋಕ್ ಜಾದವ್,ಕವಿತಾ,ಜಯದೇವದಾಸ್ ರಾವ್ ಹಾಗೂ ಆಶಾಕಿರಣ್ ವಹಿಸಿದ್ದರು.
ವಲಯದ ಹಿರಿಯರು ಸ್ಪರ್ಧೆಗೆ ಸಹಕರಿಸಿದ್ದರು ಎಂದು ಉತ್ತರ ವಲಯ ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದ್ದಾರೆ.