ಕಾರ್ಕಳ, ಜೂ 22 (DaijiworldNews/MS): ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಸಂತ್ರಸ್ತರಾದವರಿಗೆ ಬಿಜೆಪಿ ತನ್ನ ಕೈಯಿಂದ ಪರಿಹಾರ ನೀಡುವುದು ಬೇಡ. ಸರಕಾರದ ವಿವಿಧ ಮೂಲಗಳಿಂದ ಸಂಗ್ರಹಿತವಾದ ಪೆಟ್ರೋಲ್ ಡೀಸಿಲ್ ಗೇಸ್, ಜಿಎಸ್ಟಿ ಹಾಗೂ ಪಿಎಂ ಕೇರ್ ಫಂಡಿನ ಲೆಕ್ಕವಿಲ್ಲದ ಹಣವನ್ನು ವಿನಿಯೋಗಿಸಿದರೆ ಸಾಕು. ಆದರೆ ಜನರ ಸಂಕಷ್ಟದ ಅರಿವಿಲ್ಲದ ಆಳುವ ಸರಕಾರಕ್ಕೆ ಇಚ್ಛಾ ಶಕ್ತಿಯ ಕೊರತೆ ಕೊರತೆ ಇದೆ ಎಂದು ಜಿಲ್ಲಾ ಕಾಂಗ್ರಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಅವರು ಇಂದು ಇಲ್ಲಿನ ಶಾಸಕರ ಕಚೇರಿಯ ಎದುರು, ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಕನಿಷ್ಟ 5 ಲಕ್ಷ ಪರಿಹಾರ, ಬಿಪಿಲ್ ಕುಟುಂಬಗಳಿಗೆ 5000 ರೂ. ಆರ್ಥಿಕ ನೆರವಿನೊಂದಿಗೆ ಆಹಾರದ ಕಿಟ್, ಉಚಿತ ಕೋವಿಡ್ ಚಿಕಿತ್ಸೆ ಹಾಗೂ ಲಸಿಕೆ, ಮತ್ತು ಕೃಷಿ ಯಂತ್ರೋಪಕರಣ ಬಿತ್ತನೆ ಬೀಜಗಳಿಗೆ ಸಬ್ಸಿಡಿ ದರ ನೀಡಿಕೆಯೇ ಮೊದಲಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ವಿವಿಧ ಸಂಘಟನೆಗಳು ಆಯೋಜಿಸಿದ್ದ ಜನಾಗ್ರಹ ಆಂದೋಲನವನ್ನು ಉದ್ದೇಶಿಸಿ ಮತಾಡುತ್ತಿದ್ದರು.
ಹೆಬ್ರಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತಾಡಿ ಕೇವಲ ಆಶ್ವಾಸನೆಯಿಂದ ಜನರ ಸಂಕಷ್ಟ ದೂರವಾಗದು ಸರಕಾರ ವಾಸ್ತವದತ್ತ ಗಮನ ಹರಿಸಿ ಪರಿಹಾರ ನಿಉಡಲಿ ಎಂದರು.ಡಿಸಿಸಿ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾರ್ಕಳ ಬ್ಲಾಕ್ ಎಸ್ಸಿ ಘಟಕಾಧ್ಯಕ್ಷ ಅಣ್ಣಪ್ಪ ನಕ್ರೆ ಸಂದರ್ಭೋಚಿತವಾಗಿ ಮಾತಾಡಿದರು.
ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಯುವ ಕಾಂಗ್ರಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಕೃಷಿ ಘಟಕ ಕಾರ್ಯದರ್ಶಿ ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ರಾಘವ ದೇವಾಡಿಗ, ಯುವ ಕಾಂಗ್ರಸ್ ಅಧ್ಯಕ್ಷ ಯೋಗೀಶ್ ಇನ್ನ, ಹೆಬ್ರಿ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಮಾಜಿ ಜಿಪಂ.ಸದಸ್ಯ ಸುಧಾಕರ ಶೆಟ್ಟಿ, ರವಿಶಂಕರ ದೇವಾಡಿಗ, ಮಾಜಿ. ಪುರಸಭಾದ್ಯಕ್ಷ ಸುಬೀತ್ ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಆರೀಫ್ ಕಲ್ಲೊಟ್ಟೆ, ಬ್ಲಾಕ್ ಘಟಕದ ಅಸ್ಲಾಂ, ಯುವ ಕಾಂಗ್ರೆಸ್ ಕ್ಋಷ್ಣ ಶೆಟ್ಟಿ, ಪುರ ಸಭಾ ಸದಸ್ಯ ಆಶ್ಪಕ್ ಅಹಮ್ಮದ್, ಹರೀಶ್ ಕುಮಾರ್, ಶುಭದಾ ರಾವ್, ಪ್ರತಿಮಾ, ರೆಹಮತ್, ಮಾಜಿ ಸದಸ್ಯರಾದ ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಸುಶಾಂತ್ ಸುಧಾಕರ್,ರಾಮಕೃಷ್ಣ ಶೆಟ್ಟಿ ಅಜಕಾರು,ಸುಂದರ ಗೌಡ, ಅಡ್ಲಿನ್, ಸತೀಷ ಕಾರ್ಕಳ, ರಮೇಶ ಬಂಗ್ಲೆಗುಡ್ಡೆ, ಶಶಿಕಲಾ, ಅನಿತಾ ಫ್ರಾನ್ಸಿಸ್, ಮಾಲಿನಿ ರೈ, ಸುನೀಲ್ ಬಂಡಾರಿ,ಉಷಾ, ಶೊಭಾ ಇತರರು ಉಪಸ್ಥಿತರಿದ್ದರು.