ಮಂಗಳೂರು, ಜೂ 22 (DaijiworldNews/MS): ವಾಹನ ಇಲ್ಲದೆ ಮನೆ ತಲುಪಲು ಪರದಾಟುತ್ತಿದ್ದ ವೃದ್ಧ ದಂಪತಿಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ.
ಜೂ. 22 ರ ಮಂಗಳವಾರ ಕುಲಶೇಖರದ ಇಬ್ಬರು ಹಿರಿಯ ನಾಗರಿಕರು ಬ್ಯಾಂಕ್ಗೆ ಬಂದು ಕ್ಲಾಕ್ ಟವರ್ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಆಟೋ ರಿಕ್ಷಕ್ಕಾಗಿ ಕಾಯುತ್ತಿದ್ದರು. ಹಿರಿಯ ದಂಪತಿಯನ್ನು ಗಮನಿಸಿದ ಪೊಲೀಸ್ ಕಮಿಷನರ್ ಅವರನ್ನು ತಮ್ಮ ನಿವಾಸಕ್ಕೆ ತಲುಪಿಸಲು ಪೊಲೀಸ್ ವಾಹನದಲ್ಲೇ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಇನ್ನು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕ್ಲಾಕ್ ಟವರ್ನಲ್ಲಿ ವಾಹನ ತಪಾಸಣೆ ಭರದಿಂದ ಸಾಗಿತ್ತು. ಪೊಲೀಸ್ ಸಿಬ್ಬಂದಿಗಳು ಅನಗತ್ಯವಾಗಿ ಸಂಚರಿಸಿದ ವಾಹನ ಮಾಲೀಕರಿಗೆ ಮತ್ತು ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.
ಲಾಕ್ ಡೌನ್ ಸಡಿಲಕೆಯ ಪರಿಣಾಮ ನಗರದ ಕ್ಲಾಕ್ ಟವರ್ ಬಳಿ ಭಾರೀ ಸಂಚಾರ ದಟ್ಟಣೆ ಕಂಡುಬಂತು. ಇನ್ನು ಇದೇ ವೇಳೆ ಟಿಂಟೆಡ್ ಗಾಜು ಅಳವಡಿಸಿದ್ದ ಕಾರುಗಳ ವಿರುದ್ದವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.