ಉಡುಪಿ, ಜೂ.22 (DaijiworldNews/HR): ಶಾಸಕ ರಘುಪತಿ ಭಟ್ ಅವರ ಮನವಿಯ ಬಳಿಕ ಜೂನ್ 22 ಮಂಗಳವಾರದಿಂದ ಜಿಲ್ಲೆಯನ್ನು ಅನ್ಲಾಕ್ ಮಾಡಲಾಗಿದ್ದು, ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ನಗರದಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲಾಗಿದ್ದು, ಉಡುಪಿಯಿಂದ ಕುಂದಾಪುರಕ್ಕೆ ಬಸ್ಸುಗಳು ಚಲಿಸುತ್ತಿದ್ದು, ನಾಲ್ಕು ಖಾಸಗಿ ಬಸ್ಸುಗಳು ಸಹ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಆದರೆ, ಖಾಸಗಿ ಆಪರೇಟರ್ಗಳು ನಡೆಸುವ ನಗರ, ಸರ್ವಿಸ್ ಮತ್ತು ಎಕ್ಸ್ಪ್ರೆಸ್ ಬಸ್ಗಳಲ್ಲಿ ಹೆಚ್ಚಿನವು ರಸ್ತೆಗಿಳಿದಿಲ್ಲ.
ಅನ್ಲಾಕ್ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವ್ಯಾಪಾರ ಸಂಸ್ಥೆಗಳು ಸಂಜೆ 5 ರವರೆಗೆ ವ್ಯಾಪಾರ ಮಾಡಬಹುದು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದ್ದು, ಕೊರೊನಾ ಮಾರ್ಗಸೂಚಿಗಳನ್ನು ನಿರ್ವಹಿಸಲು ಅಂಗಡಿ ಮಾಲೀಕರು ಜವಾಬ್ದಾರರಾಗಿರುತ್ತಾರೆ.
ಇನ್ನು ಜಿಲ್ಲೆಯನ್ನು ಅನ್ಲಾಕ್ ಮಾಡಲಾಗಿದ್ದರೂ ನಗರದಲ್ಲಿ ವಾಹನಗಳು ಮತ್ತು ಜನರ ಹೆಚ್ಚಿನ ಚಲನೆ ಇಲ್ಲ. ಮಣಿಪಾಲ್ನಲ್ಲಿಯೂ ಅಂಗಡಿಗಳು ತೆರೆದಿದ್ದು, ಹೆಚ್ಚಿನ ಖಾಸಗಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿಲ್ಲ, ಜೊತೆಗೆ ಕೆಎಸ್ಆರ್ಟಿಸಿ ಬಸ್ಗಳು ಸಹ ಕೇವಲ 50% ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗುತ್ತಿದೆ.
ಉಡುಪಿ ಮತ್ತು ಮಂಗಳೂರು ನಡುವಿನ ಎಕ್ಸ್ಪ್ರೆಸ್ ಬಸ್ಗಳು ಇನ್ನೂ ಪ್ರಾರಂಭವಾಗಿಲ್ಲ. ಆದಾಗ್ಯೂ, ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರನ್ನು ಕುಂದಾಪುರ, ಕಾರ್ಕಳ, ಆಗುಂಬೆ ಮತ್ತು ರಾಜ್ಯದ ಇತರ ಸ್ಥಳಗಳಿಗೆ ಕರೆದೊಯ್ಯುತ್ತಿವೆ.