ಬಂಟ್ವಾಳ, ಜೂ. 21 (DaijiworldNews/SM): ವಾರದೊಳಗೆ ಬಂಟ್ವಾಳ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಲ್ಲಿ ಲಸಿಕಾ ಅಭಿಯಾನಕ್ಕೆ ಪುಟಾಣಿ ಕೃತಿಕ ಜೊತೆ ಚಾಲನೆ ನೀಡಿ ಮಾತನಾಡಿದರು.
ಲಸಿಕೆ ಅಭಿಯಾನದ ಮೂಲಕ ಲಸಿಕೆ ನೀಡುವಿಕೆಗೆ ಮತ್ತಷ್ಟು ವೇಗ ದೊರಕಿದೆ. ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದ್ದು ಆದ್ಯತೆಯ ಮೇಲೆ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು. ಬಂಟ್ವಾಳ ಕ್ಕೆ ಒಟ್ಟು ಹತ್ತು ಸಾವಿರದ ಐನೂರಕ್ಕೂ ಅಧಿಕ ಲಸಿಕೆ ಪೂರೈಕೆ ಆಗಿದ್ದು ಎಲ್ಲಾ ಆರೋಗ್ಯ ಕೇಂದ್ರ ಮೂಲಕ ಜನರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಪ್ರಂಟ್ ಲೈನ್ ವರ್ಕರ್ಸ್ ಗಳಿಗೆ ಲಸಿಕೆ ಮೊದಲ ಆದ್ಯತೆ ಯಲ್ಲಿ ನೀಡಲಾಗುತ್ತಿದ್ದು ಅವರ ಕುಟುಂಬ ಗಳಿಗೂ ಲಸಿಕೆ ಅಭಿಯಾನ ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಹತ್ತು ಪ್ರಾಣವಾಯು ಯಂತ್ರ ವನ್ನು ಆಸ್ಪತ್ರೆಗೆ ಶಾಸಕರು ಹಸ್ತಾಂತರ ಮಾಡಿದರು. ಳಿಕ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕ ಕಾಮಗಾರಿ ಯನ್ನು ವೀಕ್ಷಕಣೆ ನಡೆಸಿದರು. ಆಕ್ಸಿಜನ್ ಸಿಲಿಂಡರ್ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.