ಮಂಗಳೂರು, ಜೂ.21 (DaijiworldNews/HR): ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾದ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಹಾಗೂ ಜೋಯ್ ಫೆರ್ನಾಂಡೀಸ್ ಸೌದಿ ಅರೇಬಿಯಾ ಇವರ ಸಹಕಾರದೊಂದಿಗೆ ಬಜಾಲ್ ಸುತ್ತಮುತ್ತಲ ಪರಿಸರದ 60 ರಿಕ್ಷಾ ಚಾಲಕರಿಗೆ ಆಹಾರ ಕಿಟ್ ವಿತರಿಸಲಾಯಿತು.
ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಪಕ್ಕಲಡ್ಕ ಯುವಕ ಮಂಡಲದ ಭಗತ್ ಸಿಂಗ್ ಭವನದಲ್ಲಿ ನಡೆಯಿತು.
ಈ ವೇಳೆ ಸಂತ ಜೋಸೇಫರ ಪ್ರೌಢಶಾಲೆ ಬಜಾಲ್ ಇದರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿನೆಟ್ ಸಿಕ್ವೇರಾ, ಉದ್ಯಮಿ ಸದಾಶಿವ ದಾಸ್, ರಾಮಚಂದ್ರ ಆಳ್ವ, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್, ಕಾರ್ಯದರ್ಶಿ ಜಗದೀಶ್ ಬಜಾಲ್, ಮಾಜಿ ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿ, ಹಿರಿಯ ಮುಖಂಡ ಬಿ ನಾಗೇಶ್ ಶೆಟ್ಟಿ , ಸಂತೋಷ್ ಬಜಾಲ್ ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮದ ನೇತೃತ್ವವನ್ನು ಪಕ್ಕಲಡ್ಕ ಯುವಕ ಮಂಡಲದ ಸದಸ್ಯರಾದ ಧಿರಾಜ್, ಪ್ರಿತೇಶ್, ಉದಯ ಕುಂಟಲಗುಡ್ಡೆ, ನಾಗರಾಜ್ ಬಜಾಲ್, ನೂರುದ್ದನ್, ಪ್ರಕಾಶ್ ಶೆಟ್ಟಿ, ವರಪ್ರಸಾದ್, ಪ್ರಶಾಂತ್ ಕುಡ್ತಡ್ಕ , ಕೃಷ್ಣ ಹಾಗೂ ಮುಂತಾದವರು ವಹಿಸದ್ದರು.