ಉಡುಪಿ, ಜೂ 19 (DaijiworldNews/PY): ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಬದಲು ಇನ್ನೋರ್ವ ವ್ಯಕ್ತಿ ಪರೀಕ್ಷೆ ಬರೆದು ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಆರೋಪಿ ಪ್ರವೀಣ್ ಖೋಟ್ ಹಾಗೂ ಇನ್ನೋರ್ವ ಆರೋಪಿ ಪೊಲೀಸ್ ನೇಮಕಾತಿಯ ಹೊಂದುವ ಉದ್ದೇಶ ಹೊಂದಿದ್ದು, ಎರಡನೇ ಆರೋಪಿ ಪ್ರವೀಣ್ ಖೋಟ್ನಂತೆ ತೆರಳಿ ಜಿಲ್ಲೆಯ ಕಲ್ಯಾಣಪುರ ಸಂತೆಕಟ್ಟೆಯಲ್ಲಿರುವ ಮೌಂಟ್ ರೋಜಾರಿ ಇಂಗ್ಲೀಷ್ ಮೀಡಿಯಾಂ ಶಾಲೆಯಲ್ಲಿ ನಡೆದಿರುವ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿದ್ದಾನೆ. ಆ ಬಳಿಕ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಹಾಜರಾಗಿ ವಂಚಿಸಿದ್ದಾರೆ.
2020ರ ಡಿಸೆಂಬರ್ 19ರಂದು ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆ ಹಾಗೂ 2021ರ ಜನವರಿ 13ರಂದು ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಹಾಜರಾಗಿದ್ದಾನೆ. ಆದರೆ, ಪ್ರವೀಣ್ ಖೋಟ್ ಎಂಬಾತನ ಹೆಬ್ಬೆರಳ ಮುದ್ರೆ ಹಾಗೂ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಯ ಹೆಬ್ಬೆರಳ ಮುದ್ರೆ ಹೊಂದಾಣಿಕೆ ಆಗದೇ ಇರುವುದು ತಿಳಿದುಬಂದಿದೆ.
ಈ ಬಗ್ಗೆ ವಿಚಾರಣೆ ನಡೆಸಿ ಬೆಂಗಳೂರಿನ ಬೆರಳು ಮುದ್ರೆ ಸಂಗ್ರಹಾಲಯದಿಂದ ಪಡೆದಿರುವ ವರದಿಯಲ್ಲಿ 2020ರ ಅಕ್ಟೋಬರ್ 18ರಂದು ಸಂತೆಕಟ್ಟೆಯಲ್ಲಿ ಇರುವ ಮೌಂಟ್ ರೋಜಾರಿ ಇಂಗ್ಲೀಷ್ ಮೀಡಿಯಾಂ ಶಾಲೆಯಲ್ಲಿ ನಡೆದಿರುವ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿರುವ ಪ್ರವೀಣ್ ಖೋಟ್ ಎಂಬಾತನ ಹೆಬ್ಬೆಟ್ಟಿನ ಬೆರಳು ಮುದ್ರೆ ಹಾಗೂ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಯ ಹೆಬ್ಬೆರಳ ಮುದ್ರೆ ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.