ಮಂಗಳೂರು, ಜೂ 18 (DaijiworldNews/MS): ನಗರದಿಂದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮಾರ್ಗದಲ್ಲಿರುವ ಬಿರುಕು ಬಿಟ್ಟಿರುವ ಮರವೂರು ಸೇತುವೆಯನ್ನು ಪರಿಶೀಲಿಸಿದ ಬೆಂಗಳೂರಿನ ತಾಂತ್ರಿಕ ತಜ್ಞರ ತಂಡವು ಎರಡು ದಿನಗಳಲ್ಲಿ ಅದರ ದುರಸ್ತಿಗೆ ಯೋಜನೆಯನ್ನು ರೂಪಿಸಲಿದ್ದು ಒಂದು ತಿಂಗಳೊಳಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ತಂಡ ವ್ಯಕ್ತಪಡಿಸಿದೆ.
ಸ್ಟ್ರಾಕ್ಟ್ ಜಿಯೋಟೆಕ್ ರಿಸರ್ಚ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಆರ್ ಕೆ ಜೈಗೋಪಾಲ್ ನೇತೃತ್ವದ ತಂಡವು ಜೂನ್ 17 ರ ಗುರುವಾರ ಸೇತುವೆಯನ್ನು ಪರಿಶೀಲಿಸಿತು.
ಕೇರಳ ಮೂಲದ ನೌಶಾದ್ ನೇತೃತ್ವದ ತಂಡವು ಸೇತುವೆ ದುರಸ್ತಿಯ ಪ್ಲ್ಯಾಟ್ ಪಾರಂ ಕೆಲಸ ಪ್ರಾರಂಭಿಸಿದೆ. 25 ರಿಂದ 30 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ. ಆದಾಗ್ಯೂ, ರಿಪೇರಿ ನಂತರ ಭಾರೀ ವಾಹನಗಳಿಗೆ ಸೇತುವೆಯನ್ನು ತೆರೆಯುವ ಸಾಧ್ಯತೆಗಳ ಬಗ್ಗೆ ಅನುಮಾನಗಳಿವೆ.
ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್, ಬಿ ಟಿ ಕಾಂತರಾಜು, ಅಧೀಕ್ಷಕ ಎಂಜಿನಿಯರ್, ಗಣೇಶ್, ಕಾರ್ಯನಿರ್ವಾಹಕ ಎಂಜಿನಿಯರ್, ಯಶ್ವಂತ್ ಕುಮಾರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ ಟಿ ಚಂದ್ರಶೇಖರ್ ಉಪಸ್ಥಿತರಿದ್ದರು.