ಕಾರ್ಕಳ: ಜೂ.17 (DaijiworldNews/HR): ಮಾನವೀಯತೆ ಮೌಲ್ಯಕ್ಕೆ ಒತ್ತು ನೀಡಿದಾಗ ಸಮಾಜದಲ್ಲಿ ಕಂಡು ಬರುವ ಹಲವು ಸಮಸ್ಸೆಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್ ಕುಂದರ್ ಹೇಳಿದರು.
ಕಾರ್ಕಳ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್ನ ಕಾವೇರಡ್ಕದಲ್ಲಿ ತೀರಾ ಬಡತನ ಹಿನ್ನಲೆಯುಳ್ಳ ವಾಸು ಆಚಾರ್ಯ ಎಂಬವರ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಸೆಗಳನ್ನು ಮನಗಂಡು ಇಲಾಖಾಧಿಕಾರಿಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಾಸು ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ವಿಕಲಚೇತನರು. ಮನೆಯ ಸದಸ್ಯೆ ಮಹಿಳೆಯೊಬ್ಬರು ಮನೆಯಿಂದ ಹೊರಹೋಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಬಡ ಕುಟುಂಬಕ್ಕೆ ನೆರವಾಗುವ ಬಗ್ಗೆ ಜತೆಗಿದ್ದವರ ಜತೆ ಚರ್ಚಿಸಿದರು.
ಘಟನಾ ಸ್ತಳಕ್ಕೆ ಸಿಡಿಪಿಒ ಅಧಿಕಾರಿ ಉಮೇಶ್ ಟಿ.ಎನ್ ಅವರನ್ನು ಕರೆಸಿಕೊಂಡಿದ್ದರು.