ಕಾರ್ಕಳ, ಜೂ.17 (DaijiworldNews/HR): ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟ ಸಮಾಜ ಸೇವಕ, ಆಧುನಿಕ ಹರಿಶ್ಚಂದ್ರ ಎಂದೇ ಜನಜನಿತರಾಗಿದ್ದ ಮಿಯ್ಯಾರು ಗುಂಡಾಜೆಯ ರಾಜರಾಮ ರಾವ್ ಅವರ ಮನೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ದಿ. ರಾಜರಾಮ್ ರವರ ಪತ್ನಿ ಕಾಂಚನಾ, ಮಗಳು ಹಾಗೂ ಸಹೋದರನನ್ನು ಮಾತನಾಡಿಸಿ ಧೈರ್ಯ ತುಂಬಿದರು.
ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್, ಸಂತೋಷ್ ರಾವ್, ಕೆ ಬಿ ಕೀರ್ತನ್ ಕುಮಾರ್ ಉಪಸ್ಥಿತರಿದ್ದರು.