ಕಾರ್ಕಳ, ಜೂ.17 (DaijiworldNews/HR): ದೇಶದಲ್ಲಿ ಒಂದು ರೀತಿಯ ರಾಜಕೀಯ ಕಸರತ್ತುಗಳು ನಡೆಯುತ್ತಿದ್ದರೆ, ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪಕ್ಷಕ್ಕೆ ಮುಜುಗರ ಆಗುವ ರೀತಿಯ ಕೆಲವು ವರ್ತನೆಗಳು ಸಾರ್ವಜನಿಕರು ಅಪಹಾಸ್ಯ ಮಾಡುವ ಮಟ್ಟಿಗೆ ನಡೆಯುತ್ತಿದೆ ಎಂದು ಕಾರ್ಕಳ ಬಿಜೆಪಿ ರೈತ ಮೋರ್ಚಾ ಪ್ರಕಟಣೆಯಲ್ಲಿ ಆರೋಪಿಸಿದೆ.
ಕ್ಷೇತ್ರದ ಶಾಸಕರು ಪರಿಸರ ಉತ್ಸವ, ಸ್ವಚತಾ ಆಂದೋಲನ, ನೀರಿನ ಸಂರಕ್ಷಣೆಗಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೃಷಿ ಉತ್ತೇಜನ ನೀಡುವ ಕಾರ್ಲ ಕಜೆ, ಕಾರ್ಲ ಬಿಳಿ ಬೆಂಡೆ, ಅಭಿವೃದ್ದಿಯುತ ಅನೇಕ ಪರಿಸರ ಉಳಿಸುವ ಮತ್ತು ಆರೋಗ್ಯ ಕಾಪಾಡುವ ಕೆಲಸ ಕಾರ್ಯಗಳನ್ನು ಮಾಡುವಾಗ ಯಾವುದಕ್ಕೂ ಸ್ಪಂದಿಸದೇ, ತಾವು ಯಾವುದೇ ಈ ರೀತಿಯ ಜನಪರ ಕಾಳಜಿಯ ಕಾರ್ಯಕ್ರಮಗಳನ್ನು ಮಾಡದೇ ಕೇವಲ ಶಾಸಕರು ಮಾಡವ ಕೆಲಸಗಳಿಗೆ ಕೀಳು ಮಟ್ಟದ ಪ್ರತಿಭಟನೆ, ಅಪಹಾಸ್ಯ ಮಾಡುವ ಮೂಲಕ ಪುಕ್ಸಟ್ಟೆ ಪ್ರಚಾರ ಪಡೆಯುತ್ತಿರುವ ಕಾರ್ಕಳ ಯುವ ಕಾಂಗ್ರೆಸ್ ಮತ್ತು ವಿಚಲಿತಗೊಂಡ ಕಾಂಗ್ರೆಸಿಗರ ನಡವಳಿಕೆ ಅವರ ಮನೋಸ್ಥಿತಿಯ ಬಗ್ಗೆ ಅನುಮಾನ ಮೂಡಿಸಿದೆ ಎಂದು ಕಾರ್ಕಳ ಬಿಜೆಪಿ ಅಭಿಪ್ರಾಯ ಪಟ್ಟಿದೆ.
"ಒಂದು ರಾಷ್ಟೀಯ ಪಕ್ಷದ ಪಧಾದಿಕಾರಿ ಕಾರ್ಯಕರ್ತರಾಗಿ ಕ್ಷೇತ್ರಕ್ಕೆ, ಕ್ಷೇತ್ರದ ಜನರಿಗೆ ಕೊರೊನಾದ ಕಷ್ಷ ಕಾಲದಲ್ಲಿ ಮಾಡಿದ ಜನಉಪಯೋಗಿ ಕೆಲಸಗಳ ಬಗ್ಗೆ ಮೊದಲು ಜನರಿಗೆ ತಿಳಿಸಿ ಬಹಿರಂಗ ಪಡಿಸಿ ತದನಂತರ ಬಿಜೆಪಿ ಮತ್ತು ಶಾಸಕರ ಬಗ್ಗೆ ಕೀಳು ಮಟ್ಟದ ರಾಜಕಾರಣ ಮಾಡಿ. ಡಾಮಾರು ರಸ್ತೆಯ ಮಧ್ಯದಲ್ಲಿ ಹೊರಗಿನಿಂದ ಮಣ್ಣು ತಂದು ಹಾಕಿ ಉಪಯೋಗಿ ಬಲಿತ ಬೆಂಡೆ ಗಿಡವನ್ನು ಅದರ ಸ್ವಸ್ಥಾನದಿಂದ ಕಿತ್ತು ಇಲ್ಲಿ ನೆಟ್ಟು ಈ ರೀತಿ ಮನೋವಿಕಲತೆ ಇರುವವರ ತರಹ ವಿಕೃತಿ ಮೆರೆದಿರುವುದು ಇಡೀ ಕಾರ್ಕಳ ರೈತರನ್ನು ಅವಮಾನಿಸಿದೆ" ಎಂದಿದೆ.
ಇನ್ನು ಬಿಳಿಬೆಂಡೆ ನೆಡಲು ಕಾರ್ಕಳ ರಸ್ತೆಗಳಲ್ಲಿ ಎಲ್ಲೂ ಹೊಂಡಗಳಿಲ್ಲ ಅಷ್ಟರ ಮಟ್ಟಿಗೆ ಶಾಸಕರ ಅಭಿವೃದ್ದಿ ಕೆಲಸ ಗೋಚರಿಸುತ್ತದೆ. ಕೃಷಿ ಮಾಡಲು ನಿಮಗೆ ಬಯಕೆ ಇದ್ದರೆ ನೂರಾರು ಎಕ್ರೆ ಹಡಿಲು ಗದ್ದೆ ಜಾಗ ಲಭ್ಯವಿದೆ, ಅಲ್ಲಿ ಕೃಷಿ ಮಾಡಿ ನಿಮ್ಮ ಪೌರುಷ ತೋರಿಸಲಿ ಎಂದು ಕಾರ್ಕಳ ಬಿಜೆಪಿ ರೈತ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ.