ಮಂಗಳೂರು/ಉಡುಪಿ, ಜೂ 17 (DaijiworldNews/MS): ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇದು ಇನ್ನೂ ಮುಂದುವರಿದಿದೆ.
ಉದ್ಯಾವರದ ಕನಕೋಡದಲ್ಲಿ ಗಾಳಿ ಮಳೆ ತೀವ್ರವಾಗಿದ್ದಾಗ ಸ್ವಿಚ್ಬೋರ್ಡ್ ಪರಿಶೀಲಿಸುತ್ತಿದ್ದ ಮೋಕ್ಷಿತ್ ಕರ್ಕೆರಾ (25) ವಿದ್ಯುದಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಜೂನ್ 16 ಬುಧವಾರ ಸಂಜೆ ಸಂಭವಿಸಿದೆ. ಮೋಕ್ಷಿತ್ ಮಲ್ಪೆ ಕೊಡವೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದರು. ಸಮಯ ಸಿಕ್ಕಾಗಲೆಲ್ಲಾ ಅವನು ತನ್ನ ತಾಯಿಯೊಂದಿಗೆ ಮೀನು ಮಾರಾಟದ ವೃತ್ತಿಗೆ ಸಹಾಯ ಮಾಡುತ್ತಿದ್ದರು. ಮನೋಜ್ ಕರ್ಕೇರಾ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯರಾದ ಮೋಕ್ಷಿತ್ ಕುಟುಂಬವನ್ನು ಪೋಷಿಸುತ್ತಿದ್ದರು.
ಇದಲ್ಲದೆ ಭಾರೀ ಗಾಳಿ ಮತ್ತು ಮಳೆಯಿಂದಾಗಿ, ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಪಾಂಗಳದಲ್ಲಿ ೮ ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ. ಗರ್ಡಾಡಿ ಸಮೀಪ ಅಡಿಕೆ, ತೆಂಗು,ಸೇರಿದಂತೆ ಕೃಷಿ ಭೂಮಿಗೆ ಹಾನಿ ಉಂಟಾಗಿದ್ದು ೮ ವಿದ್ಯುತ್ ಕಂಬ ಧರೆಗುರುಳಿದೆ.
ಬಂಟ್ವಾಳದ ಕಡೇಶ್ವಾಲ್ಯ ಗ್ರಾಮದ ಸಂಪೋಲಿ ಬಳಿ ಬೃಹತ್ ಆಲದ ಮರ ರಸ್ತೆ ಬಿದ್ದ ನಂತರ ಐದು ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಕೋಡಿಕಲ್ ಬಳಿ ಮುಖ್ಯ ಕಾಲುವೆಯ ಗೋಡೆ ಕುಸಿದಿದೆ. ಮಂಚಿ ಗ್ರಾಮದಲ್ಲಿ ಮನೆಯ ತಡೆ್ಗೋಡೆ ಕುಸಿದಿದೆ.