ಬಂಟ್ವಾಳ, ಜೂ 17 (DaijiworldNews/MS): ಸಂಘಟನೆಯ ಪ್ರಮುಖರಿಗೆ ಪದೇ ಪದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಹಾಗೂ ವಿಹಿಂಪ - ಬಜರಂಗ ದಳ ಪರಸ್ಪರ ಬಂಟ್ವಾಳ ಪೋಲಿಸರಿಗೆ ದೂರು ನೀಡಿವೆ.
ಒಂದು ಸಂಘಟನೆ ತಮ್ಮ ಜಿಲ್ಲಾ ಸಂಯೋಜಕರು ಹಾಗೂ ಮತ್ತೊಂದು ಸಂಘಟನೆ ತಮ್ಮ ಸದಸ್ಯರ ಮೇಲೆ, ಪರಸ್ಪರ ಬೆದರಿಕೆ- ಹಲ್ಲೆ ಆರೋಪ ಮಾಡಿದೆ.
ಕಳೆದ ಜೂ.7ರಂದು 2 ತಂಡಗಳ ಮಧ್ಯೆ ನಡೆದ ಗಲಭೆ , ಕಾರಿನ ಮೇಲೆ ದಾಳಿ, ಮಾರಕಾಯುಧ ಹಿಡಿದಿರುವ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.