ಕಾಸರಗೋಡು, ಜೂ 16 (DaijiworldNews/PY): ಮೀನುಗಾರಿಕಾ ಸಾಗಾಟ ನೆಪದಲ್ಲಿ ಪಿಕಪ್ ವ್ಯಾನ್ನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 2,100 ಲೀಟರ್ ಸ್ಪಿರಿಟ್ ಅನ್ನು ಬೇಕಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮಂಜೇಶ್ವರದ ಇಬ್ಬರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಕುಂಜತ್ತೂರಿನ ಅಬ್ದುಲ್ ರಹಮಾನ್ ಮುಬಾರಕ್ (30) ಮತ್ತು ಸೈಯಿದ್ ಮುಹಮ್ಮದ್ ಇಮ್ರಾನ್ (25) ಎಂಬರವನ್ನು ಬಂಧಿಸಲಾಗಿದೆ.
ಬುಧವಾರ ಬೆಳಿಗ್ಗೆ ಬೇಕಲ ಸೇತುವೆ ಬಳಿಯಿಂದ ಸ್ಪಿರಿಟ್ ಹಾಗೂ ಪಿಕಪ್ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿದ್ದ ಸ್ಪಿರಿಟ್ ನ ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
35 ಲೀಟರ್ ಸಾಮಾರ್ಥ್ಯದ 60 ಕ್ಯಾನ್ಗಳಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿದ್ದು, .ಮಂಗಳೂರಿನಿಂದ ಕೋಜಿಕ್ಕೋಡ್ ಗೆ ಸ್ಪಿರಿಟ್ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ
ಬೇಕಲ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು.