ಕಿನ್ನಿಗೋಳಿ, ಜೂ 16 (DaijiworldNews/PY): ಕಿನ್ನಿಗೋಳಿ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಗಳ ಸಹಕಾರದೊಂದಿಗೆ, ಕಲಾ ಪೋಷಕರು ಹಾಗೂ ದಾನಿಗಳ ನೆರವಿನಿಂದ ಕಿನ್ನಿಗೋಳಿ ವಿಜಯಾ ಕಲಾವಿದರು ನಾಟಕ ತಂಡದ 35 ಕಲಾವಿದರಿಗೆ 70 ಸಾವಿರ ರೂ.ಮೌಲ್ಯದ ಪಡಿತರ ಸಾಮಾಗ್ರಿ ವಿತರಣೆ ಬುಧವಾರ ಏಳಿಂಜೆಯ ಪೊರ್ಲು ಲಂಚ್ ಹೋಂನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮಾತನಾಡಿ, "ಕಳೆದೆರಡು ವರ್ಷಗಳಿಂದ ಕಲಾವಿದರು ನಾಟಕ ಪ್ರದರ್ಶನಗಳಿಲ್ಲದೆ ಕಂಗೆಟ್ಟಿದ್ದು ಈ ಕೊಡುಗೆ ಅರ್ಥಪೂರ್ಣ" ಎಂದರು.
ಪ್ರಗತಿಪರ ಕೃಷಿಕ ಪೊಸ್ರಾಲು ಜಯರಾಮ ಶೆಟ್ಟಿ, ಸಾಮಾಜಿಕ ಕಳಕಳಿಯ ಚಿಂತಕ ಮುಲ್ಕಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಸಚ್ಚರಪರಾರಿ ಸಂದೀಪ್ ಶೆಟ್ಟಿ, ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಅರುಣ್ ರಾವ್, ರೋಟರಿ ನಿಯೋಜಿತ ಅಧ್ಯಕ್ಷ ಸ್ವರಾಜ್ ಶೆಟ್ಟಿ, ನಿಯೋಜಿತ ಕಾರ್ಯದರ್ಶಿ ರಾಜೇಶ್ ಕೆಂಚನಕೆರೆ, ಸದಸ್ಯರಾದ ಸತೀಶ್ಚಂದ್ರ ಹೆಗ್ಡೆ, ಮೈಕಲ್ ಪಿಂಟೋ, ಪ್ರವೀಣ್ ಸಾಲ್ಯಾನ್, ಕೆ.ಬಿ.ಸುರೇಶ್, ಇನ್ನರ್ ವೀಲ್ ಅಧ್ಯಕ್ಷೆ ಅಂಬಿಕಾ ಪ್ರತಾಪ್, ನಿಯೋಜಿತ ಅಧ್ಯಕ್ಷೆ ರೇಣುಕಾ ಸ್ವರಾಜ್, ಸದಸ್ಯರಾದ ಪೂರ್ಣಿಮಾ ಶೆಟ್ಟಿ, ಮಮತಾ ಶೆಟ್ಟಿ, ಚಂದ್ರ ಶೆಟ್ಟಿ, ರಾಧಾ ಶೆಣೈ, ರೇಖಾ ಶೆಟ್ಟಿ, ವಿಜಯಾ ಕಲಾವಿದರ ಕಾರ್ಯದರ್ಶಿ ಲಕ್ಷ್ಮಣ್, ನಿರ್ವಾಹಕ ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಯ ರೂವಾರಿ, ವಿಜಯಾ ಕಲಾವಿದರ ಸಂಚಾಲಕ ಸಾಯಿನಾಥ ಶೆಟ್ಟಿ ಪ್ರಸ್ತಾವನೆಗೈದರು. ಅಧ್ಯಕ್ಷ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.