ಮಂಗಳೂರು, ಜೂ. 15 (DaijiworldNews/SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮರವೂರು ಸೇತುವೆಯಲ್ಲಿ ಬಿರುಕು ಬಿಟ್ಟ ಹಿನ್ನಲೆಯ ಸೇತುವೆ ದುರಸ್ಥಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ನಡೆಸಿ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಹೈಡ್ರೋಲಿಕ್ ತಂತ್ರಜ್ಞಾನ ಬಳಸಿ ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಗರ್ಡಾರ್ ಅನ್ನು ಸೇತುವೆಗೆ ಸಮತಟ್ಟು ಮಾಡಿ ಸರಿಪಡಿಸಲು ಯೋಜನೆ ರೂಪಿಸಲಾಗಿತ್ತಿದೆ. ಈ ಮೂಲಕ ಸಂಚಾರಕ್ಕೆ ಅವಕಾಶ ಮಾಡಲು ಪ್ಲಾನ್ ಮಾಡಲಾಗಿದೆ. ಹೈಡ್ರೋಲಿಕ್ ತಂತ್ರಜ್ಞಾನ ಬಳಸಿ ಈ ಕಾಮಗಾರಿ ನಡೆಯಲಿದೆ. ಕೇರಳ ಮೂಲದ ನೌಶದ್ ಜತೆ ಈ ಕುರಿತು ಮಾತುಕತೆ ನಡೆಸಲಾಗಿದೆ. ನೌಶಾದ್ ಇಂದು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಕಾಮಗಾರಿಯ ಗುತ್ತಿಗೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹೈಡ್ರೋಲಿಕ್ ತಂತ್ರಜ್ಞಾನದ ಕಾಮಗಾರಿಗೆ ಒಂದು ತಿಂಗಳು ಬೇಕಾಗುತ್ತದೆ. ಕಾಮಗಾರಿ ನಡೆದ ಬಳಿಕ ದ್ವಿಚಕ್ರ, ಕಾರು, ಬಸ್ ಸಂಚಾರ ಮಾಡಬಹುದಾಗಿದೆ. ಆದರೆ ಲಾರಿಗಳ ಸಂಚಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಬೆಂಗಳೂರಿನಿಂದ ತಂಡವೊಂದು ಆಗಮಿಸಿ ಪರಿಶೀಲನೆ ನಡೆಸಲಿದೆ. ಶೀಘ್ರದಲ್ಲೇ ಹೈಡ್ರೋಲಿಕ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.