ಕಾಸರಗೋಡು, ಜೂ. 15 (DaijiworldNews/SM): ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟ ಘಟನೆ ಪೆರಿಯ ಕೋಡೊತ್ ನಲ್ಲಿ ನಡೆದಿದೆ.
ಉದಯಪುರದ ಕೆ. ಆರ್. ಮನೋಜ್(37) ಮೃತಪಟ್ಟವರು. ಗಂಭೀರ ಗಾಯಗೊಂಡ ಮನೋಜ್ ರವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಜೀವ ಉಳಿಸಲಾಗಲಿಲ್ಲ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.