ಕಾರ್ಕಳ, ಜೂ 14 (DaijiworldNews/MS): ತಾಲೂಕಿನ ಬೈಲೂರು ಬಸ್ರಿ ಶಾಲೆಯ ಸಮೀಪ ಹಾದು ಹೋಗುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ತೀವ್ರ ತರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುವೊಬ್ಬರು ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಿಯಾರು ಗುಂಡಾಜೆ ಬಳಿಯ ನಿವಾಸಿ ರಾಜಾರಾಮ ರಾವ್ (55) ಎಂಬವರು ಪ್ರಾಣಕಳೆದುಕೊಂಡವರು. ಜೂನ್ ೮ರಂದು ಈ ಘಟನೆ ಸಂಭವಿಸಿದೆ. ಸರಕು ಸಾಗಾಣಿಕಾ ಕೆಎ 20 ಎಬಿ 0925 ನಂಬ್ರದ ಲಾರಿಯ ಚಾಲಕನು ತನ್ನ ವಾಹನವನ್ನು ಕಾರ್ಕಳದಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದು ಘಟನೆಗೆ ಕಾರಣವನೆನ್ನಲಾಗಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ರಾಜರಾಮ ರಾವ್ ಚಲಾಯಿಸಿಕೊಂಡು ಬರುತ್ತಿದ್ದ ಕೆಎ 20ಎಎ 2631 ನಂಬ್ರದ ಗೂಡ್ಸ್ ರಿಕ್ಷಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗೂಡ್ಸ್ ರಿಕ್ಷಾ ಡಾಮಾರು ರಸ್ತೆಯಲ್ಲಿ ಮಗುಚಿಬಿದ್ದು, ಅದರ ಚಾಲಕ ರಾಜರಾಮ್ ರಾವ್ ಅವರ ಕಿಬ್ಬೊಟ್ಟೆ, ಬೆನ್ನಿಗೆ ಮತ್ತು ಬೆನ್ನು ಮೂಳೆಗೆ ರಕ್ತಗಾಯವಾಗಿತ್ತು.
ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ರಾಜರಾಮ ರಾವ್ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿತ್ತು. ಟೈಲರಿಂಗ್,ಗೂಡ್ಸ್ ಟೆಂಪೋ ಚಾಲಕರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ರಾಜರಾಮರಾವ್ ಅವರು ಆಧುನಿಕ ಹರಿಶ್ಚಂದ್ರ ಎಂದೇ ಹೆಸರುವಾಸಿಯಾಗಿದ್ದರು. ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಹಲವು ಅನಾಥರ ಶವಗಳನ್ನು ದಫನ ಹಾಗೂ ದಹನ(ಅಂತ್ಯ ಸಂಸ್ಕಾರ ) ನೆರವೇರಿಸುತ್ತಿದ್ದರು