ಉಡುಪಿ, ಜೂ 14(DaijiworldNews/MS): ಸುಧಾರಿತ ಕೋವಿಡ್ 19 ಪರಿಸ್ಥಿತಿಯ ನಡುವೆ ಉಡುಪಿ ಜಿಲ್ಲಾಡಳಿತ ಲಾಕ್ಡೌನ್ ಮಾನದಂಡಗಳನ್ನು ಇಂದಿನಿಂದ ಕೊಂಚ ಸಡಿಲಗೊಳಿಸಿದೆ. ಲಾಕ್ ಡೌನ್ ಅವಧಿಯಲ್ಲಿ ದಿನಸಿ ಸಾಮಾಗ್ರಿಸಹಿತ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿತ್ತು. ಅನ್ ಲಾಕ್ ಪ್ರಕ್ರಿಯೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳಿಗೆ ಹೆಚ್ಚಿನ ಸಮಯವನ್ನು ಅನುಮತಿಸಲಾಗಿದೆ. ಜನರು ಇಂದಿನಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳು, ತರಕಾರಿಗಳು, ಹಾಲು, ಇತ್ಯಾದಿಗಳನ್ನು ಖರೀದಿಸಬಹುದಾಗಿದೆ.
ಸಿಮೆಂಟ್ ಸೇರಿದಂತೆ ಕಟ್ಟಡ ಸಾಮಗ್ರಿಗಳ ಮಾರಾಟಕ್ಕೆ ಈಗ ಅನುಮತಿ ನೀಡಲಾಗಿದೆ. ಮೊಬೈಲ್ ಅಂಗಡಿಗಳಿಗೆ ಒಂದು ದಿನ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಆದಾಗ್ಯೂ, ವ್ಯವಹಾರವನ್ನು ನಡೆಸುವಾಗ, ಅಂಗಡಿಗಳು ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಇನ್ನು ಅನ್ ಲಾಕ್ -1 ರ ಮೊದಲ ದಿನ, ಜನರ ಸಂಚಾರದಲ್ಲಿ ತೀರಾ ವಿರಳವಾಗಿ ಕಂಡುಬಂದಿದೆ. ಜಿಲ್ಲೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಇದಕ್ಕೆ ಕಾರಣವಾಗಿದೆ.
ಇನ್ನು ಕೆಲವು ಸಡಿಲಿಕೆ ಹೊರತುಪಡಿಸಿ ಹಿಂದಿನ ಎಲ್ಲಾ ಲಾಕ್ಡೌನ್ ಮಾರ್ಗಸೂಚಿಗಳನ್ನು ಜೂನ್ 21 ರವರೆಗೆ ಮುಂದುವರಿಯುವುದು. ಜನರು ಇದೀಗ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಮೂಲಕ ಒಂದು ಸಮಯದಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರಿಗೆ ಪ್ರಯಾಣಿಸಬಹುದಾಗಿದ್ದರೂ ಅನಗತ್ಯವಾಗಿ ತಿರುಗಾಡುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.