ಕಾರ್ಕಳ, ಜೂ.12 (DaijiworldNews/HR): ನಗರದ ಕಾಳಿಕಾಂಬ ಶ್ರೀ ಕ್ಷೇತ್ರ ಬಳಿಯ ಮನೆಯ ಮೇಲ್ಚಾವಣಿಯ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಸುಮಾರು ಒಂದು ಲಕ್ಷ ಹಾನಿ ಸಂಭವಿಸಿದೆ.
ಶನಿವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ.
ರವೀಂದ್ರ ರಾವ್ ಎಂಬವರಿಗೆ ಸೇರಿದ ಮನೆ ಅದಾಗಿದ್ದು ಮನೆಯ ಮೇಲ್ಚಾವಣೆಯನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದರು.
ಕಂದಾಯ ನಿರೀಕ್ಷಕ ಶಿವಪ್ರಸಾದ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.